ಪಾಟ್ನಾ, ಅ 08 (DaijiworldNews/HR): ಕಳೆದ ಮೇ ತಿಂಗಳಿನಿಂದ ಬಿಹಾರ ರಾಜ್ಯದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಗಾಹಾದಲ್ಲಿ 9 ಜನರನ್ನು ಕೊಂದಿರುವ ಹುಲಿಯನ್ನು ಕೊಲ್ಲಲು ಬಿಹಾರ ಸರ್ಕಾರ ಆದೇಶ ನೀಡಿದೆ.
ಸಾಂದರ್ಭಿಕ ಚಿತ್ರ
ಈ ಕುರಿತು ಮಾಹಿತಿ ನೀಡಿರುವ ಬಿಹಾರದ ಅರಣ್ಯ ಇಲಾಖೆಯ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಮ್ ಚೀಫ್ ವನ್ಯಜೀವಿ ವಾರ್ಡನ್ ಪ್ರಭಾತ್ ಕುಮಾರ್ ಗುಪ್ತಾ, ಕಳೆದ ಮೇ ತಿಂಗಳಿನಿಂದ 9 ಜನರನ್ನು ಕೊಂದಿದ್ದು, ಜನರ ಸಾವಿಗೆ ಕಾರಣವಾದ ನರಭಕ್ಷಕ ಹುಲಿಯನ್ನು ಕೊಲ್ಲಲು ಆದೇಶ ನೀಡಲಾಗಿದೆ ಎಂದರು.
ಇನ್ನು ಹುಲಿಯ ಸೆರೆಗೆ ಹೈಟೆಕ್ ಕಣ್ಗಾವಲು ವ್ಯವಸ್ಥೆಗಳು, ಆಧುನಿಕ ರೈಫಲ್ಗಳೊಂದಿಗೆ ಪ್ರಮಾಣೀಕೃತ ಶೂಟರ್ಗಳು ಮತ್ತು 150 ಅನುಭವಿ ಫಾರೆಸ್ಟ್ ಗಾರ್ಡ್ಗಳು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.