ಮುಂಬೈ, ಅ 08 (DaijiworldNews/HR): ಏಕನಾಥ್ ಶಿಂಧೆ ಮತ್ತು ದೇವೇಂದ್ರ ಫಡ್ನವಿಸ್ ಸರ್ಕಾರವು ತಮ್ಮ ಅವಧಿಯಲ್ಲಿ ಕೇವಲ ಗಣಪತಿ ಮತ್ತು ನವರಾತ್ರಿಯ ಪೆಂಡಲ್ಗಳಿಗೆ ಭೇಟಿ ನೀಡಿ ಸರ್ಕಾರ ಉಳಿಸಲು ಶ್ರಮಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷವು ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಏಕನಾಥ್ ಶಿಂಧೆ, ಬಿಜೆಪಿ ಮೈತ್ರಿ ಸರ್ಕಾರ 100 ದಿನಗಳನ್ನು ಪೂರೈಸಿದ್ದು, ಈ 100 ದಿನಗಳಲ್ಲಿ ಸರ್ಕಾರವು ಫಾಕ್ಸ್ಕಾನ್-ವೇದಾಂತ ಸೆಮಿಕಂಡಕ್ಟರ್ ಪ್ಲಾಂಟ್ನಂತಹ ಬೃಹತ್ ಯೋಜನೆಗಳನ್ನು ಓಡಿಸಲು ಕೆಲಸ ಮಾಡಿದೆ ಎಂದಿದೆ.
ಇನ್ನು ಗಣೇಶೋತ್ಸವ ಮತ್ತು ನವರಾತ್ರಿಯ ಸಮಯದಲ್ಲಿ ಪೆಂಡಲ್ ಗಳಿಗೆ ಭೇಟಿ ನೀಡಿ ಸರ್ಕಾರ ಉಳಿಸಿಕೊಳ್ಳಲು ಕೆಲಸ ಮಾಡಿದೆ ಎಂದು ಹೇಳಿದೆ.
ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನದ ನಂತರ ಜೂನ್ 30 ರಂದು ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಮತ್ತು ಬಿಜೆಪಿಯ ಫಡ್ನವಿಸ್ ಸರ್ಕಾರ ರಚನೆ ಮಾಡಿದ್ದಾರೆ.