ಉತ್ತರಕಾಶಿಲ್, ಅ 07 (DaijiworldNews/HR): ದ್ರೌಪದಿ ಕಾ ದಂಡ ಶಿಖರದಲ್ಲಿ ಹಿಮಪಾತ ಸಂಭವಿಸಿದ ಪರಿಣಾಮ ನಾಪತ್ತೆಯಾಗಿದ್ದವರ ಪೈಕಿ ಮತ್ತೆ 10 ಮಂದಿಯ ಮೃತದೇಹಗಳು ಪತ್ತೆಯಾಗಿದ್ದು, ಮೃತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ಭೂಸೇನೆಯ ಎರಡು ಚೀತಾ ಹೆಲಿಕಾಪ್ಟರ್ಗಳನ್ನು ಶೋಧ ಕಾರ್ಯಾಚರಣೆಗೆ ಬಳಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಎನ್ಐಎಂ ಸಂಸ್ಥೆಯ ಪರ್ವತಾರೋಹಿಗಳ ತಂಡ ದ್ರೌಪದಿ ಕಾ ದಂಡ ಶಿಖರ ಏರಿ ಮರಳುತ್ತಿದ್ದಾಗ 17 ಸಾವಿರ ಅಡಿ ಎತ್ತರದಲ್ಲಿ ಹಿಮಪಾತ ಸಂಭವಿಸಿತ್ತು.