ಉತ್ತರಾಖಂಡ, ಅ 07 (DaijiworldNews/HR): ಉತ್ತರಕಾಶಿ ಜಿಲ್ಲೆಯ ದ್ರೌಪದಿ ಕಾ ದಂಡಾ ಪರ್ವತ ಶಿಖರದಲ್ಲಿ ಅ.4 ರಂದು ಬೆಳಿಗ್ಗೆ ಟ್ರಕ್ಕಿಂಗ್ ಹೋದ ಇನ್ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ (ಎನ್ಐಎಂ) ಪರ್ವತಾರೋಹಿಗಳು ಹಿಮಪಾತದಲ್ಲಿ ಸಿಲುಕಿದ್ದು, ಇದುವರೆಗೆ ಒಟ್ಟು 19 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, 10 ಮಂದಿ ಕಾಣೆಯಾಗಿದ್ದು ಶೋಧಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಮೂಲಕ ಒಟ್ಟು 19 ಮೃತದೇಹಗಳನ್ನು ಶವಗಳನ್ನು ಮಟ್ಲಿ ಹೆಲಿಪ್ಯಾಡ್ಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ಎಎನ್ಐಗೆ ತಿಳಿಸಿದ್ದಾರೆ.
ಇನ್ನು 19 ಮೃತದೇಹಗಳ ಪೈಕಿ ನಾಲ್ಕು ಮೃತದೇಹಗಳನ್ನು ಎಸ್ಡಿಆರ್ಎಫ್ ತಂಡ ಶಿಬಿರಕ್ಕೆ ತರಲಾಗಿದ್ದು, 15 ಮೃತದೇಹಗಳನ್ನು ಘಟನೆಯ ಸ್ಥಳದಲ್ಲಿ ಇರಿಸಲಾಗಿದೆ.
ದ್ರೌಪದಿಯ ದಂಡಾ ಶಿಖರಕ್ಕೆ ಶಿಖರವನ್ನು ಏರಲು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಹಿಮಪಾತ ಸಂಭವಿಸಿದ್ದು, ಸುಮಾರು 60 ಅಡಿ ಆಳದ ಬಿರುಕುಗಳಿಗೆ ಬಿದ್ದು, ಸುಮಾರು 3 ಗಂಟೆಗಳ ಕಾಲ ಸಾವು ಮತ್ತು ಬದುಕಿನ ಮಧ್ಯೆ ಹೋರಾಡಿದ್ದಾರೆ.