ಗೋರಖ್ಪುರ, ಅ 07 (DaijiworldNews/HR): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್ಪುರ ಮೃಗಾಲಯಕ್ಕೆ ಭೇಟಿ ನೀಡಿ ಅಲ್ಲಿ ಚಿರತೆ ಮರಿಗೆ ಆಹಾರ ನೀಡಿದ್ದಾರೆ.
ಗೋರಖ್ಪುರ ಮೃಗಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಆದಿತ್ಯನಾಥ್ ಅವರು ಕಾನ್ಪುರದ ಮೃಗಾಲಯದಿಂದ ತರಲಾದ ಬಿಳಿ ಹುಲಿ ಮತ್ತು ಎರಡು ಹಿಮಾಲಯನ್ ಕಪ್ಪು ಕರಡಿಗಳನ್ನು ಮೃಗಾಲಯದಲ್ಲಿ ಬಿಡುಗಡೆ ಮಾಡಿದರು.
ಇನ್ನು ಮೃಗಾಲಯದ ಆಸ್ಪತ್ರೆಯಲ್ಲಿ ಇರಿಸಲಾಗಿದ್ದ ಎರಡು ಚಿರತೆ ಮರಿಗಳಿಗೆ ಭವಾನಿ ಮತ್ತು ಚಂಡಿ ಎಂದು ಹೆಸರಿಟ್ಟಿದ್ದು, ಯೋಗಿ ಅವರು ಚಿರತೆ ಮರಿಗೆ ಹಾಲನ್ನು ಕುಡಿಸಿದ್ದಾರೆ.