ಬೆಂಗಳೂರು, ಅ 07 (DaijiworldNews/MS): "ಸೋಲಾರ್ ಹಗರಣದ ತನಿಖೆ ಮಾಡಿ ನಾನು ತಪ್ಪು ಮಾಡಿದ್ರೆ ನನ್ನ ಗಲ್ಲಿಗೇರಿಸಿಲಿ " ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ 10.30ಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಹಾಗೂ ಅವರ ಸಹೋದರ ಸಂಸದ, ಡಿ ಕೆ ಸುರೇಶ್ ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ.
ಸೋಲಾರ್ ಹಂಚಿಕೆ ಹಗರಣದ ಕುರಿತು ತನಿಖೆ ನಡೆಸಲಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿ.ಕೆ ಶಿವಕುಮಾರ್ , "ಸೋಲಾರ ಹಗರಣದ ಸಂಬಂಧ ದಾಖಲೆ ನೀಡಲು ಸಿದ್ದನಿದ್ದೇನೆ . ರೈತರಿಂದ ಅಕ್ರಮವಾಗಿ ಭೂಮಿ ಪಡೆದಿದ್ದರೆ ಕ್ರಮ ಕೈಗೊಳ್ಳಲಿ. ತಪ್ಪಿದ್ದರೆ ನನ್ನ ಗಲ್ಲಿಗೇರಿಸಲಿ .ಸಿಬಿಐ ಸೇರಿ ಯಾವ ಸಂಸ್ಥೆಯಿಂದಲೂ ತನಿಖೆ ಮಾಡಲಿ. ಇಡಿಯವರು ಯಾವ ವಿಚಾರದ ಬಗ್ಗೆ ಕೇಳುತ್ತಾರೆ ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ಜೋಡೋ ಯಾತ್ರೆ ನಡೆಯುತ್ತಿರುವುದರಿಂದ ನಮಗೆ ಸಮಯ ಕೊಡಿ ಅಂದರೂ ಇಡಿಯವರು ಕೇಳಲಿಲ್ಲ. ನಾವು ಕಾನೂನುನನ್ನು ಗೌರವಿಸಿ ವಿಚಾರಣೆಗೆ ಆಗಮಿಸಿದ್ದೇನೆ ಎಂದು ಹೇಳಿದ್ದಾರೆ.
"ಜಾರಿ ನಿರ್ದೇಶನಾಲಯ(ಇಡಿ) ಸಮನ್ಸ್ ನೀಡಿದ್ದಾರೆ. ಹೀಗಾಗಿ ಇಂದು ನಾವು ವಿಚಾರಣೆಗೆ ಬಂದಿದ್ದೇವೆ .ನನಗೆ ಹಾಗೂ ನನ್ನ ತಮ್ಮನಿಗೆ ಇಡಿಯವರು ಸಮನ್ಸ್ ನೀಡಿದ್ದಾರೆ. ಬೇರೆ ಪ್ರಕರಣದಲ್ಲೂ ಇಡಿಯವರು ನಮಗೆ ಸಮನ್ಸ್ ಜಾರಿ ಮಾಡಿದ್ದಾರೆ ಎಂದು ಹೇಳಿದ್ದಾರೆ.