ಮುಂಬೈ, ಅ 06 (DaijiworldNews/DB): ಶಿವಸೇನೆಯು ಶಿವ ಸೈನಿಕರದ್ದೇ ಹೊರತು ಉದ್ದವ್ ಠಾಕ್ರೆಯವರ ಪ್ರೈವೆಟ್ ಲಿಮಿಟೆಡ್ ಕಂಪೆನಿಯಲ್ಲ ಎಂದು ಉದ್ದವ್ ಠಾಕ್ರೆ ವಿರುದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಸೇನೆ ಕಟ್ಟುವುದಕ್ಕಾಗಿ ಶಿವ ಸೈನಿಕರು ಬೆವರು ಹರಿಸಿ ದುಡಿದಿದ್ದಾರೆ. ಅಂತಹ ಸೈನಿಕರಿಗೆ ಶಿವಸೇನೆ ಸೇರಿದೆಯೇ ಹೊರತು ಅಧಿಕಾರದ ಆಸೆಗೆ ಪಾಲುದಾರಿಕೆಯಂತಹ ನಿಕೃಷ್ಟ ಮಟ್ಟಕ್ಕಿಳಿಯುವ ನಿಮ್ಮಂತಹವ ಪ್ರೈವೆಟ್ ಲಿಮಿಟೆಡ್ ಕಂಪೆನಿ ಇದಲ್ಲ ಎಂದು ಹರಿಹಾಯ್ದರು.
ನನ್ನನ್ನು ಕಟ್ಟಪ್ಪ ಎಂದು ಸಂಬೋಧಿಸುವ ಅವರು ಕಟ್ಟಪ್ಪ ಕೂಡಾ ಸ್ವಾಭಿಮಾನಿ ಎಂಬುದನ್ನು ತಿಳಿದುಕೊಳ್ಳಲಿ. ಅವರಂತಹ ಡಬಲ್ ಸ್ಟಾಂಡರ್ಡ್ ವ್ಯಕ್ತಿಯಲ್ಲ ಎಂಬುದನ್ನು ಅವರು ಅರಿತು ನಡೆದರೆ ಉತ್ತಮ ಎಂದು ಉದ್ದವ್ ಠಾಕ್ರೆ ಹೇಳಿಕೆಗೆ ತಿರುಗೇಟು ನೀಡಿದರು.
ಶಿಂಧೆ ಬಣದ ನಾಯಕ ರಾಮದಾಸ್ ಕದಂ ಮಾತನಾಡಿ, ಉದ್ದವ್ ಠಾಕ್ರೆಯವರ ಸಹೋದರ, ಸೋದರ ಸಂಬಂಧಿಗಳು, ರಾಜ್ ಠಾಕ್ರೆ ಯಾರೊಬ್ಬರೂ ಅವರೊಂದಿಗೆ ಇಂದು ಇಲ್ಲ. ಕುಟುಂಬವನ್ನೇ ಉಳಿಸಿಕೊಳ್ಳಲಾಗದವರು ರಾಜ್ಯವನ್ನು ಹೇಗೆ ಉಳಿಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.