ನವದೆಹಲಿ, ಅ 06(DaijiworldNews/MS): ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ಉದಿತ್ ರಾಜ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತಾಗಿ ಮಾಡಿರುವ ಟ್ವೀಟ್ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಟ್ವೀಟೊಂದರಲ್ಲಿ ʼಯಾವುದೇ ದೇಶಕ್ಕೆ ಇಂತಹ ರಾಷ್ಟ್ರಪತಿ ಸಿಗಬಾರದುʼ ಎಂದಿರುವ ಅವರು ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಹಲವರು ಟೀಕಿಸುತ್ತಿದ್ದಾರೆ.
ದ್ರೌಪದಿ ಮುರ್ಮು ಅವರಂತಹ ರಾಷ್ಟ್ರಪತಿಗಳು ಯಾವ ದೇಶಕ್ಕೂ ಸಿಗಬಾರದು. "ಚಮಚಗಿರಿಗೂ ಅದರ ಮಿತಿಯಿದೆ. ಶೇ. 70ರಷ್ಟು ಜನರು ಗುಜರಾತ್ನ ಉಪ್ಪನ್ನು ತಿನ್ನುತ್ತಾರೆ. ಆದರೆ ನೀವೇ ಉಪ್ಪನ್ನು ತಿನ್ನುತ್ತಾ ಜೀವನ ನಡೆಸಿದರೆ ನಿಮಗೆ ತಿಳಿಯುತ್ತದೆ. ಎಂದು ಅವರು ಟ್ವೀಟ್ ಮಾಡಿದ್ದಾರೆ.
ಈ ಹಿಂದೆ, ಗುಜರಾತ್ ದೇಶದಲ್ಲಿ 76% ಉಪ್ಪನ್ನು ಉತ್ಪಾದಿಸುತ್ತದೆ . ಈ ರಾಜ್ಯದಲ್ಲಿ ಉತ್ಪಾದಿಸುವ ಉಪ್ಪನ್ನು ಎಲ್ಲಾ ಭಾರತೀಯರು ಸೇವಿಸುತ್ತಾರೆ" ಎಂದು ಹೇಳಬಹುದು ಎಂದು ರಾಷ್ಟ್ರಪತಿ ಹೇಳಿದ್ದರು.
ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ ಟ್ವೀಟ್ ಮಾಡಿ, " ದೇಶದ ಮೊದಲ ಆದಿವಾಸಿ ಮಹಿಳಾ ರಾಷ್ಟ್ರಪತಿಯವರ ಬಗ್ಗೆ ಉದಿತ್ ರಾಜ್ ಸ್ವೀಕಾರಾರ್ಹವಲ್ಲದ ಭಾಷೆ ಬಳಸಿದ್ದಾರೆ! ಆದಿವಾಸಿ ಸಮಾಜದ ಈ ಅವಮಾನವನ್ನು ಕಾಂಗ್ರೆಸ್ ಅನುಮೋದಿಸುತ್ತದೆಯೇ?" ಎಂದು ಅವರು ಪ್ರಶ್ನಿಸಿದ್ದಾರೆ.