ನವದೆಹಲಿ, ಅ 05 (DaijiworldNews/HR): ಅಂತಾರಾಷ್ಟ್ರೀಯ ಉದ್ಯೋಗ ದಂಧೆಗೆ ಬಲಿಯಾಗಿ ಮ್ಯಾನ್ಮಾರ್ನ ಮೈವಾಡ್ಡಿ ಪ್ರದೇಶದಲ್ಲಿ ಸಿಲುಕಿದ್ದ ಸುಮಾರು 13 ಭಾರತೀಯರನ್ನು ರಕ್ಷಿಸಲಾಗಿದೆ.
ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ , ಅಂತಾರಾಷ್ಟ್ರೀಯ ಉದ್ಯೋಗ ದಂಧೆಗೆ ಬಲಿಯಾಗಿ ಮ್ಯಾನ್ಮಾರ್ನ ಮೈವಾಡ್ಡಿ ಪ್ರದೇಶದಲ್ಲಿ ಸಿಲುಕಿದ್ದ ಸುಮಾರು 13 ಭಾರತೀಯರನ್ನು ರಕ್ಷಿಸಲಾಗಿದ್ದು, ಇವರೆಲ್ಲ ತಮಿಳುನಾಡಿಗೆ ತಲುಪಿದ್ದಾರೆ ಎಂದಿದ್ದಾರೆ.
ಇನ್ನು ಕೆಲವು ಭಾರತೀಯ ನಾಗರಿಕರನ್ನು ಅವರ ನಕಲಿ ಉದ್ಯೋಗದಾತರಿಂದ ರಕ್ಷಿಸಲಾಗಿದ್ದು, ಅವರೆಲ್ಲ ದೇಶಕ್ಕೆ ಅಕ್ರಮ ಪ್ರವೇಶಕ್ಕಾಗಿ ಮ್ಯಾನ್ಮಾರ್ ಅಧಿಕಾರಿಗಳ ವಶದಲ್ಲಿದ್ದಾರೆ. ಆದಷ್ಟು ಬೇಗ ಅವರನ್ನು ಸ್ವದೇಶಕ್ಕೆ ಕರೆತರಲು ಕಾನೂನು ಕ್ರಮಗಳನ್ನು ಆರಂಭಿಸಲಾಗುವುದು ಎಂದರು.
ಸಪ್ಟಂಬರ್ ನಲ್ಲಿ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ನಲ್ಲಿನ ಭಾರತೀಯ ಮಿಷನ್ಗಳ ಜಂಟಿ ಪ್ರಯತ್ನಗಳ ನಂತರ 32 ಭಾರತೀಯರನ್ನು ಮೈವಾಡಿಯಿಂದ ರಕ್ಷಿಸಲಾಯಿಗಿತ್ತು.