ಆಗ್ರಾ, ಅ 05 (DaijiworldNews/HR): ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಆರ್.ಮಧುರಾಜ್ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿ ಆಸ್ಪತ್ರೆಯ ನಿರ್ವಾಹಕ ಡಾ.ರಾಜನ್ ಸಿಂಗ್, ಅವರ ಮಗ ರಿಷಿ ಮತ್ತು ಮಗಳು ಶಾಲು ಬೆಂಕಿಯಲ್ಲಿ ಸಾವನ್ನಪ್ಪಿದ್ದಾರೆ.
ಘಟನೆ ವಿಷಯ ತಿಳಿದು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿ ರೋಗಿಗಳನ್ನು ಹೊರತೆಗೆದು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ಆರ್.ಮಧುರಾಜ್ ಆಸ್ಪತ್ರೆಯ ಮೊದಲ ಮಹಡಿಯ ಕೋಣೆಯಲ್ಲಿ ಇರಿಸಲಾಗಿದ್ದ ಹಾಸಿಗೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದೇ ಮಹಡಿಯಲ್ಲಿ ಆಸ್ಪತ್ರೆಯ ಆಪರೇಟರ್ ಡಾ.ರಾಜನ್, ಅವರ ತಂದೆ ಗೋಪಿಚಂದ್, ಪತ್ನಿ ಮಧುರಾಜ್, ಮಗಳು ಶಾಲು, ಮಕ್ಕಳಾದ ಲಾವಿ ಮತ್ತು ರಿಷಿ ಮತ್ತು ಸಂಬಂಧಿ ತೇಜ್ವೀರ್ ಇದ್ದರು. ಗೋಪಿಚಂದ್ ಮತ್ತು ಲಾವಿ ಬೆಳಿಗ್ಗೆ 5 ಗಂಟೆಗೆ ಎಚ್ಚರಗೊಂಡಾಗ, ಅವರು ಹಾಸಿಗೆಯ ಕೋಣೆಯಲ್ಲಿ ಬೆಂಕಿಯನ್ನು ನೋಡಿದ್ದು, ಹಾಸಿಗೆಗಳನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ ಆದರೆ ಅಷ್ಟೊತ್ತಿಗಾಗಲೇ, ಬೆಂಕಿಯ ಹೊಗೆ ಒಳಭಾಗವನ್ನು ತಲುಪಿತು ಎನ್ನಲಾಗಿದೆ.
ಇನ್ನು ಡಾ.ರಾಜನ್, ಅವರ ಮಗಳು ಶಾಲು ಮತ್ತು ಮಗ ರಿಷಿ ಇದುವರೆಗೆ ದೃಢಪಡಿಸಿದ ಮೂರು ಸಾವನ್ನಪ್ಪಿದ್ದು, ಹಿರಿಯ ಮಗ ಲಾವಿಯ ಸ್ಥಿತಿ ಗಂಭೀರವಾಗಿದ್ದು, ತಾಯಿ ಮಧುರಾಜ್ ಅಲಿಯಾಸ್ ರಾಜರಾಣಿ ಅಪಾಯದಿಂದ ಪಾರಾಗಿದ್ದಾರೆ.