ನವದೆಹಲಿ, ಅ 04 (DaijiworldNews/DB): ಚುನಾವಣೆ ಸಂದರ್ಭದಲ್ಲಿ ಭರವಸೆಗಳನ್ನು ನೀಡುವ ರಾಜಕೀಯ ಪಕ್ಷಗಳು ತಮ್ಮ ಹಣಕಾಸಿನ ನೆರವು ಒದಗಿಸುವ ವಿಧಾನಗಳ ವಿವರ ನೀಡಬೇಕು ಎಂದು ಕೇಂದ್ರ ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ಸೂಚಿಸಿದೆ.
ರಾಜಕೀಯ ಪಕ್ಷಗಳು ತಮ್ಮಿ ಚುನಾವಣಾ ಪ್ರಣಾಳಿಕೆಯಲ್ಲಿ ವಿವಿಧ ಭರವಸೆಗಳನ್ನು ಜನರಿಗೆ ನೀಡುತ್ತವೆ. ಆದರೆ ಈ ಭರವಸೆಗಳ ಆರ್ಥಿಕ ಪರಿಣಾಮ, ಹಣ ಒದಗಿಸುವ ವಿಧಾನಗಳ ವಿವರಗಳನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ಶೀಘ್ರ ಯೋಜನೆ ರೂಪಿಸಲಾಗುತ್ತಿದ್ದು, ಅಕ್ಟೋಬರ್ 19 ರೊಳಗೆ ಪ್ರತಿಕ್ರಿಯೆ ನೀಡಬೇಕು ಎಂದು ಪತ್ರದಲ್ಲಿ ತಿಳಿಸಿದೆ.
ಪಕ್ಷಗಳು ಸುಳ್ಳು ಭರವಸೆ ನೀಡುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಚುನಾವಣಾ ಆಯೋಗವು, ಪ್ರಣಾಳಿಕೆ ರೂಪಿಸುವುದು ಪಕ್ಷಗಳ ಹಕ್ಕು. ಆದರೆ ಈಡೇರಿಸಲು ಸಾಧ್ಯವಿರುವ ಭರವಸೆಗಳನ್ನು ಮಾತ್ರ ನೀಡಬೇಕು. ಅನಪೇಕ್ಷಿತ ಭರವಸೆ ನೀಡುವುದು ನ್ಯಯಸಮ್ಮತವಲ್ಲ ಎಂದು ತಿಳಿಸಿದೆ.