ಜಮ್ಮು, ಅ 4 (DaijiworldNews/HR): ಗುಜ್ಜರ್ ಮತ್ತು ಬಕರ್ ವಾಲಾ ಹೊರತಾಗಿ ಪಹಾಡಿ ಜನಾಂಗಕ್ಕೂ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಪರಿಶಿಷ್ಟ ಪಂಗಡದ (ಎಸ್ಟಿ) ಮೀಸಲಾತಿ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು-ಕಾಶ್ಮೀರದಲ್ಲಿ ಘೋಷಿಸಿದ್ದಾರೆ.
ಈ ಕುರಿತು ಸಮಾವೇಶದಲ್ಲಿ ಮಾತನಾಡಿದ ಅವರು, ಜಮ್ಮು-ಕಾಶ್ಮೀರದ ಪಹಾಡಿ ಸಮುದಾಯ ಕೂಡಾ ಜಸ್ಟೀಸ್ ಶರ್ಮಾ ಆಯೋಗ ನೀಡಿರುವ ಶಿಫಾರಸ್ಸಿನಂತೆ ಮೀಸಲಾತಿಯ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ ಎಂದರು.
ಇನ್ನು ಪಹಾಡಿ ಸಮುದಾಯದಂತೆ ಗುಜ್ಜರ್ ಮತ್ತು ಬಕರ್ ವಾಲಾ ಸಮುದಾಯ ಕೂಡಾ ಪರಿಶಿಷ್ಟ ಪಂಗಡದ ಪ್ರಯೋಜನವನ್ನು ಪಡೆಯಲಿದ್ದು, 2019ರಲ್ಲಿ 370ನೇ ಕಲಂ ಅನ್ನು ರದ್ದುಪಡಿಸುವ ಮೂಲಕ ಜಮ್ಮು-ಕಾಶ್ಮೀರದಲ್ಲಿನ ಅಭಿವೃದ್ಧಿ ವಂಚಿತ ಸಮುದಾಯಗಳು ಮೀಸಲಾತಿ ಪ್ರಯೋಜನ ಪಡೆಯುವ ಹಾದಿ ಸುಗಮವಾದಂತಾಗಿದೆ ಎಂದು ಹೇಳಿದ್ದಾರೆ.