ನವದೆಹಲಿ, ಅ 02 (DaijiworldNews/DB): ತಾಜ್ಮಹಲ್ನ್ನು ಶಹಜಹಾನ್ ನಿರ್ಮಿಸಿದ್ದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಈ ಬಗ್ಗೆ ನಿಖರ ಮಾಹಿತಿಗಾಗಿ ಸತ್ಯಶೋಧನಾ ಸಮಿತಿ ರಚಿಸಬೇಕು ಎಂದು ವ್ಯಕ್ತಿಯೊಬ್ಬರು ಸುಪ್ರಿಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಡಾ. ರಜನೀಶ್ ಸಿಂಗ್ ಎಂಬುವವರು ಅರ್ಜಿ ಸಲ್ಲಿಸಿದ್ದು, ತಾಜ್ಮಹಲ್ನ ಇತಿಹಾಸದಲ್ಲಿ ಹಲವು ಸಂಗತಿಗಳ ಬಗ್ಗೆ ವಿವರಗಳಿವೆ. ಆದರೆ ಅದರ ಸಾಬೀತುಪಡಿಸುವ ಸಂಬಂಧ ವೈಜ್ಞಾನಿಕ ಪುರಾವೆಗಳು ಲಭ್ಯವಿಲ್ಲ. ಇದನ್ನು ತಿಳಿದುಕೊಳ್ಳಲು ಸಮಿತಿ ರಚನೆ ಅಗತ್ಯವಾಗಿದೆ ಎಂದವರು ಅರ್ಜಿಯಲ್ಲಿ ತಿಳಿಸಿದ್ದಾರೆ.
ತಾಜ್ಮಹಲ್ನ ನೆಲ ಮಾಳಿಗೆ ಕೊಠಡಿಗಳನ್ನು ತೆರೆಯಲು ಮತ್ತು ವಾಸ್ತವ ಹಾಗೂ ಸತ್ಯಾಂಶ ತೆರೆದಿಡಬೇಕೆಂದು ಒತ್ತಾಯಿಸಿ ಡಾ. ರಜನೀಶ್ ಸಿಂಗ್ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಇದನ್ನು ತಿರಸ್ಕರಿಸಿತ್ತು. ಹೀಗಾಗಿ ಅಲಹಾಬಾದ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.