ಪುಣೆ, ಅ 01 (DaijiworldNews/DB): ನಿರಂತರ ಟ್ರಾಫಿಕ್ ಜಾಂಗೆ ಕಾರಣವಾಗಿದ್ದ ಪುಣೆಯ ಹಳೆಯ ಸೇತುವೆಯೊಂದನ್ನು ಭಾನುವಾರ ಮುಂಜಾನೆ 1 ಗಂಟೆ ಸುಮಾರಿಗೆ ಕೆಡವಲಾಯಿತು. ಸೇತುವೆ ಧ್ವಂಸ ಹಿನ್ನೆಲೆಯಲ್ಲಿ ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ತಿಳಿದು ಬಂದಿದೆ.
ಸದ್ಯ ಸೇತುವೆಯ ಅವಶೇಷಗಳು ಉಳಿದುಕೊಂಡು ಅವುಗಳ ವಿಲೇವಾರಿಯಾಗಬೇಕಿದೆ. ಈ ನಿಟ್ಟಿನಲ್ಲಿ ಕೆಲಸ ಸಾಗುತ್ತಿದೆ ಎಂದು ಎಡಿಫೈಸ್ ನ ಸಹ- ಎಂಜಿನಿಯರ್ ಚಿರಾಗ್ ಛೇಡಾ ತಿಳಿಸಿರುವುದಾಗಿ ವರದಿಯಾಗಿದೆ.
ಪುಣೆಯ ಚಾಂದಿನಿ ಚೌಕ್ ನಲ್ಲಿದ್ದ ಸೇತುವೆಯನ್ನು ಸ್ಪೋಟಕ ಬಳಸಿ ಕೆಡವಿ ಹಾಕಲಾಯಿತು. 90ರ ದಶಕದ ಆರಂಭದಲ್ಲಿ ಮುಂಬೈ-ಬೆಂಗಳೂರು ಹೆದ್ದಾರಿಗೆ ಸಂಪರ್ಕ ಕಲ್ಪಿಸಲು ಚಾಂದನಿ ಚೌಕ್ ನಲ್ಲಿ ನಿರ್ಮಿಸಲಾಗಿತ್ತು. ಆದರೆ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದಂತೆ ಈ ಸೇತುವೆಯಲ್ಲಿ ಅನಗತ್ಯ ಟ್ರಾಫಿಕ್ ಜಾಂ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಅದನ್ನು ಕೆಡವಿ ಹಾಕಲಾಗಿದೆ. ಜಂಕ್ಷನ್ ನಲ್ಲಿ ಬಹುಹಂತದ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ.