ಕೊಟ್ಟಾಯಂ, ಅ 02 (DaijiworldNews/HR): ಸೆ.26ರಿಂದ ನಾಪತ್ತೆಯಾಗಿದ್ದ ಕೇರಳದ ಕೊಟ್ಟಾಯಂನ ಬಿಜೆಪಿ ಕಾರ್ಯಕರ್ತನ ಮೃತದೇಹ ಆತನ ಸ್ನೇಹಿತನ ಮನೆಯ ಆವರಣದಲ್ಲಿಯೇ ಪತ್ತೆಯಾಗಿದೆ.
ಸಾಂದರ್ಭಿಕ ಚಿತ್ರ
ದೃಶ್ಯಂ ಸಿನೆಮಾದಲ್ಲಿ ದೃಶ್ಯವೊಂದರಲ್ಲಿ ಬರುವ ಮಾದರಿಯಲ್ಲಿಯೇ ಕೊಲೆ ನಡೆಸಿ ಮೃತದೇಹವನ್ನು ಹೂಳಲಾಗಿದ್ದು, ಮರಣೋತ್ತರ ಪರೀಕ್ಷೆಯಿಂದ ಈ ಅಂಶ ದೃಢಪಟ್ಟಿದೆ.
ಇನ್ನು ಈ ಬಗ್ಗೆ ಅವರ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಅದರ ಆಧಾರದಲ್ಲಿ ತನಿಖೆ ನಡೆಸಿ ಆತನ ಸ್ನೇಹಿತ ಬಾಡಿಗೆಗೆ ಇದ್ದ ಮನೆಯ ಆವರಣದಲ್ಲಿಯೇ ಬಿಂದುಮೋನ್ನ ಮೃತದೇಹ ಪತ್ತೆಯಾಗಿದೆ.