ವಾರಣಾಸಿ, ಅ 01 (DaijiworldNews/DB): ಕಾರಿನಲ್ಲಿ ಬಂದ ಆಗಂತುಕರ ತಂಡವೊಂದು ಪೆಟ್ರೋಲ್ ಪಂಪ್ ಮಾಲಕನನ್ನು ಅಪಹರಿಸಲು ವಿಫಲ ಯತ್ನ ನಡೆಸಿದ ಘಟನೆ ಶಿವಪುರಿಯ ತರ್ನಾದಲ್ಲಿ ನಡೆದಿದೆ.
ನಾಲ್ವರು ಆಗಂತಕರು ಪೆಟ್ರೋಲ್ ಹಾಕುವ ನೆಪದೊಂದಿಗೆ ಎಸ್ಯುವಿ ಕಾರಿನಲ್ಲಿ ಪೆಟ್ರೋಲ್ ಪಂಪ್ಗೆ ಬಂದಿದ್ದಾರೆ. ಈ ವೇಳೆ ಉಪಾಯದಿಂದ ಮಾಲಕನನ್ನು ಅಪಹರಣ ಮಾಡಲು ಪ್ರಯತ್ನಿಸಿದ್ದಾರೆ. ಕೂಡಲೇ ಪಂಪ್ ಸಿಬಂದಿ ಮಧ್ಯ ಪ್ರವೇಶಿಸಿ ಅಪಹರಣ ಯತ್ನವನ್ನು ತಡೆದಿದ್ದಾರೆ. ಸಿಬಂದಿಯ ಸಮಯಪ್ರಜ್ಞೆಯಿಂದ ಮಾಲಕ ಬಚಾವಾಗಿದ್ದಾನೆ. ಅಪಹರಣ ಯತ್ನ ವಿಫಲಗೊಂಡದ್ದರಿಂದ ಅಪಹರಣಕಾರರು ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾರೆ.
ಘಟನೆಯ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆಂದು ತಿಳಿದು ಬಂದಿದೆ.