ಬಿಹಾರ, ಅ 01 (DaijiworldNews/HR): ಬಿಜಾರದ ಗಯಾದಲ್ಲಿ ದುರ್ಗಾ ದೇವಿಯ ಪೂಜೆಗೆಂದು ಇಡಲಾಗಿದ್ದ ಸೇಬು ಹಣ್ಣನ್ನು ತಿಂದಿದಕ್ಕೆ ಆರು ವರ್ಷದ ವಿದ್ಯಾರ್ಥಿಯನ್ನು ತನ್ನ ಶಾಲೆಯಲ್ಲಿ ಥಳಿಸಿ ಕೊಂದಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತ ಬಾಲಕನ್ನು ವಿವೇಕ್ ಎಂದು ಗುರುತಿಸಲಾಗಿದ್ದು, ಬಾಕಿ ಬಿಘಾ ಗ್ರಾಮದ ಲಿಟಲ್ ಲೀಡರ್ಸ್ ಪಬ್ಲಿಕ್ ಸ್ಕೂಲ್ ಅನ್ನು ನಡೆಸುತ್ತಿರುವ ಇಬ್ಬರನ್ನು ಬಂಧಿಸಲಾಗಿದೆ.
ಶಾಲೆಯ ಆವರಣದೊಳಗೆ ದುರ್ಗಾಪೂಜೆ ಆಯೋಜಿಸಲಾಗಿದ್ದು, ಈ ವೇಳೆ ವಿವೇಕ್ ಪೂಜೆಗೆಂದು ಇಟ್ಟಿದ್ದ ಸೇಬು ಹಣ್ಣು ತಿಂದಿದ್ದಾನೆ. ಇದರಿಂದ ಕೋಪಗೊಂಡ ಶಾಲಾ ಸಿಬ್ಬಂದಿಗಳು ಆತನನ್ನು ಶಾಲಾ ಕೊಠಡಿಗೆ ಕರೆದೊಯ್ದು ಥಳಿಸಿದ್ದಾರೆ ಎನ್ನಲಾಗಿದೆ.
ಇನ್ನು ವಿವೇಕ್ ಶಾಲೆಯ ಗೇಟ್ನ ಹೊರಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಆಟೋ ಡ್ರೈವರ್ ಅವನನ್ನು ಗುರುತಿಸಿ ಮನೆಗೆ ಕರೆತಂದು ಬಳಿಕ ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುವ ಮಾರ್ಗಮಧ್ಯೆ ವಿವೇಕ್ ಮೃತಪಟ್ಟಿದ್ದಾನೆ ಎಂದು ವಿವೇಕ್ ಅಜ್ಜ ಹೇಳಿದ್ದಾರೆ.