ಪಾಟ್ನಾ, ಸೆ 23 (DaijiworldNews/DB): ಬಿಜೆಪಿಗೆ ನಿತೀಶ್ಕುಮಾರ್ ದ್ರೋಹ ಬಗೆದಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ನಿತೀಶ್ಕುಮಾರ್ ಅವರು ಎನ್ಡಿಎ ಮೈತ್ರಿಕೂಟದಿಂದ ಹೊರಬಂದು ಕಾಂಗ್ರೆಸ್ನೊಂದಿಗೆ ಮಹಾಘಟಬಂಧನ್ ಸೇರಿದ ಬಳಿಕ ಇದೇ ಮೊದಲ ಬಾರಿಗೆ ಬಿಹಾರದಲ್ಲಿ ಬಿಜೆಪಿ ವತಿಯಿಂದ ನಡೆದ ಜನಭವನ ಮಹಾಸಭಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ನಿತೀಶ್ಕುಮಾರ್ ಅವರು ಪ್ರಧಾನಿ ಹುದ್ದೆ ಆಕಾಂಕ್ಷೆಯಿಂದಾಗಿ ಬಿಜೆಪಿಗೆ ದ್ರೋಹ ಮಾಡಿದ್ದಾರೆ ಎಂದರು.
ಕೇಂದ್ರ ಸರ್ಕಾರವು ಬಿಹಾರ ಜನತೆಯ ರಕ್ಷಣೆಗೆ ಸದಾ ಬದ್ದವಾಗಿದೆ. ಈ ರಾಜ್ಯದಲ್ಲಿ ವಿಮಾನ ನಿಲ್ದಾಣವನ್ನೂ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಬಿಜೆಪಿಯ ಏಕವ್ಯಕ್ತಿ ಚುನಾವಣಾ ಪ್ರಚಾರವನ್ನು ಬಿಹಾರದಲ್ಲಿ ಅಮಿತ್ ಶಾ ಅಧಿಕೃತವಾಗಿ ಆರಂಭಿಸಿದರು.
ರ್ಯಾಲಿ ಬಳಿಕ ಕಿಶನ್ಗಂಜ್ನಲ್ಲಿ ಬಿಹಾರದ ಬಿಜೆಪಿ ಸಂಸದರು, ಶಾಸಕರು ಮತ್ತು ಮಾಜಿ ಸಚಿವರೊಂದಿಗೆ ಅಮಿತ್ ಶಾ ಅವರು ಸಭೆ ನಡೆಸಲಿದ್ದು, ಸಂಜೆ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.