ರಾಜಸ್ಥಾನ, ಸೆ 19 (DaijiworldNews/HR): ರಾಜಸ್ಥಾನದ ಜೋಧ್ ಪುರದಲ್ಲಿ ನಾಯಿಯ ಬಾಯಿಗೆ ಬಟ್ಟೆ ಕಟ್ಟಿ ಅದನ್ನು ಕಾರಿಗೆ ಕಟ್ಟಿ ಚಾಲಕ ಎಳೆದೊಯ್ದು ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ರೀತಿಯಾಗಿ ವಿಕೃತಿ ಮೆರೆದ ವೈದ್ಯನ ಹೆಸರು ಡಾ.ರಜನೀಶ್ ಗಾಲ್ವಾ. ಈತ ನಾಯಿ ಬೊಬ್ಬೆ ಹೊಡೆಯದಂತೆ ಬಾಯಿಗೆ ಬಟ್ಟೆಯಿಂದ ಕಟ್ಟಿ ಕುತ್ತಿಗೆಗೆ ಹಗ್ಗ ಬಿಗಿದು ಅದನ್ನು ತನ್ನ ಕಾರಿಗೆ ಕಟ್ಟಿ ಎಳೆದೊಯ್ಯುತ್ತಿರುವುದನ್ನು ವಿಡಿಯೋ ಕಾಣಬಹುದು.
ಇನ್ನು ಈ ವಿಡಿಯೋವನ್ನು ಅಲ್ಲಿದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದು ಅಲ್ಲದೆ ಅದನ್ನು ಕಂಡ ಕೆಲವರು ಶ್ವಾನದ ರಕ್ಷಣೆಗೆ ಮುಂದಾಗಿದ್ದಾರೆ ಆದರೆ ವೈದ್ಯ ಮಾತ್ರ ಕಾರು ನಿಲ್ಲಿಸದೆ ಮುಂದೆ ಚಲಿಸಿದ್ದು, ಸಾರ್ವಜನಿಕರು ಮತ್ತೆ ಕಾರನ್ನು ಅಡ್ಡಕಟ್ಟಿ ಶ್ವಾನದ ರಕ್ಷಣೆ ಮಾಡಿದ್ದಾರೆ.
ನನ್ನ ಮನೆಯ ಪಕ್ಕದಲ್ಲೇ ಬೀದಿ ನಾಯಿ ಅಡ್ಡಾಡುತ್ತಿದ್ದು ಇದರಿಂದ ಕಿರಿಕಿರಿಯಾಗುತ್ತಿತ್ತು ಅದಕ್ಕಾಗಿ ಅದನ್ನು ಬೇರೆಡೆಯೆ ಬಿಟ್ಟು ಬರಲು ಈ ರೀತಿಯಾಗಿ ಕರೆದೊಯ್ಯುತ್ತಿದ್ದೆ ಎಂದು ವೈದ್ಯ ಹೇಳಿರುವುದಾಗಿ ಡಾಗ್ ಹೋಮ್ ಫೌಂಡೇಶನ್ ಟ್ವೀಟ್ ಮಾಡಿದೆ.