ಭುವನೇಶ್ವರ,ಸೆ 17 (DaijiworldNews/HR): ಒಡಿಶಾದ ರಾಜಧಾನಿ ಭುವನೇಶ್ವರದ ಶಾಸ್ತ್ರಿನಗರ ಪ್ರದೇಶದ ಸುತ್ತಮುತ್ತ ಕರಿ ಬೆಕ್ಕೊಂದು 25 ಮಂದಿಯ ಮೇಲೆ ದಾಳಿ ನಡೆಸಿ ಜನರ ನಿದ್ದೆಗೆಡಿಸಿರುವ ಘಟನೆ ನಡೆದಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬರುವ ಕಪ್ಪು ಬೆಕ್ಕು ಮಕ್ಕಳು, ಹಿರಿಯರು ಎನ್ನದೆ ಎಲ್ಲರ ಮೇಲೆ ದಾಳಿ ನಡೆಸುತ್ತಿದ್ದು, ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ, ಇನ್ನೂ ಕೆಲವರು ಕೈಯಲ್ಲಿ ಕೋಲು ಹಿಡಿದುಕೊಂಡು ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ.
ಇನ್ನು ಮನೆಯ ಮಾಳಿಗೆಯ ಮೇಲೆ ಬಟ್ಟೆ ಒಣಗಿಸಲು ಹೋಗಿದ್ದ ಮಹಿಳೆಯ ಕಾಲಿಗೆ ಕರಿ ಬೆಕ್ಕು ಕಚ್ಚಿ ಪರಾರಿಯಾಗಿದ್ದು, ಬೆಕ್ಕಿನ ದಾಳಿಯಿಂದ ಕಂಗೆಟ್ಟ ಜನ ಮಹಾನಗರ ಪಾಲಿಕೆಗೆ ದೂರು ನೀಡಿ ಬೆಕ್ಕನ್ನು ಸೆರೆಹಿಡಿಯಲು ಮನವಿ ಮಾಡಿದ್ದಾರೆ.
ಮಹಾನಗರ ಪಾಲಿಕೆ ಸತತ ಕಾರ್ಯಾಚರಣೆಯ ಬಳಿಕ ಬೆಕ್ಕನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.