ನವದೆಹಲಿ, ಸೆ 11 (DaijiworldNews/HR): ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ(99) ಅವರು ಮಧ್ಯಪ್ರದೇಶದ ನರಸಿಂಗಪುರದಲ್ಲಿ ನಿಧನರಾಗಿದ್ದಾರೆ.
ಸೆಪ್ಟೆಂಬರ್ 9,1924 ರಂದು ಜನಿಸಿದ ಅವರು, ಕೆಲವು ದಿನಗಳ ಹಿಂದೆ ತಮ್ಮ 99 ನೇ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿದ್ದು, ಇಂದು ನಿಧನರಾಗಿದ್ದಾರೆ.
ಶಂಕರಾಚಾರ್ಯ ಸ್ವರೂಪಾನಂದರು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ದ ಹೋರಾಡಿದ್ದರು ಎನ್ನಲಾಗಿದೆ.
ಶಂಕರಾಚಾರ್ಯ ಸ್ವರೂಪಾನಂದರು ಬ್ರಿಟಿಷರ ವಿರುದ್ದ ಹೋರಾಡಿ ಎರಡು ಬಾರಿ ಜೈಲುವಾಸವನ್ನೂ ಅನುಭವಿಸಿದ್ದು, 1989 ರಲ್ಲಿ ಅವರು ಶಂಕರಾಚಾರ್ಯ ಎಂಬ ಬಿರುದನ್ನು ಪಡೆದರು.