ಹೊಶಿಯಾರ್ಪುರ್, ಸೆ 10 (DaijiworldNews/DB): ಉನ್ನತ ಅಧಿಕಾರಿಯೊಬ್ಬರು ಅವಮಾನಿಸಿದರೆಂಬ ಕಾರಣಕ್ಕೆ ಸಹಾಯಕ ಸಬ್ ಇನ್ಸ್ಪೆಕ್ಟರ್ವೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರ್ಯಾಣ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಸತೀಶ್ಕುಮಾರ್ ( 52) ಆತ್ಮಹತ್ಯೆಗೈದ ಎಎಸ್. ಆತ್ಮಹತ್ಯೆಗೂ ಮುನ್ನ ಅವರು ವೀಡಿಯೋ ರೆಕಾರ್ಡ್ ಮಾಡಿದ್ದು, ತನ್ನ ಸಾವಿಗೆ ಉನ್ನತ ಅಧಿಕಾರಿಯೊಬ್ಬರು ಕಾರಣ ಎಂದು ಆರೋಪಿಸಿದ್ದಾರೆ. ತಾಂಡಾ ಸ್ಟೇಷನ್ ಹೌಸ್ ಅಧಿಕಾರಿ ಓಂಕರ್ ಸಿಂಗ್ ಬ್ರಾರ್ ಅವರು ತನ್ನನ್ನು ಅವಮಾನಿಸಿದ್ದಾರೆ. ಸೆ.8ರಂದು ನಡೆದ ನಡೆದ ತಪಾಸಣೆಯ ವೇಳೆ ಅವರು ಅವಮಾನ ಮಾಡಿರುವುದರಿಂದ ತುಂಬಾ ಬೇಸರಗೊಂಡಿದ್ದೇನೆ ಎಂದು ವೀಡಿಯೋದಲ್ಲಿ ಅವರು ಹೇಳಿಕೊಂಡಿದ್ದಾರೆ.
ಇನ್ನು ಘಟನೆ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸರ್ತಾಜ್ ಸಿಂಗ್ ಚಾಹಲ್, ಘಟನೆಯ ತನಿಖೆ ನಡೆಯುತ್ತಿದೆ ಎಂದಿದ್ದಾರೆ.