ನವದೆಹಲಿ, ಸೆ 09 (DaijiworldNews/MS): ಪ್ರಮುಖ ಅಕ್ಕಿ-ಬೆಳೆಯುವ ರಾಜ್ಯಗಳಲ್ಲಿ ಅತಿವೃಷ್ಟಿ - ಅನಾವೃಷ್ಟಿಯ ಹಿನ್ನಲೆ ಭತ್ತದ ಬೆಳೆ ಕಡಿಮೆಯಾಗಿದ್ದು, ಹೀಗಾಗಿ ದೇಶದಲ್ಲಿ ಸಧ್ಯದಲ್ಲೇ ಆವರಿಸಲಿರುವ ಅಕ್ಕಿ ಕೊರತೆ ಹಾಗೂ ಅದರಿಂದಾಗುವ ಅಕ್ಕಿ ಬೆಲೆಯ ಏರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ಮುಂದಾಲೋಚನೆಯ ಕ್ರಮ ಕೈಗೊಂಡಿದೆ.
ಇದಕ್ಕಾಗಿ ದೇಶೀಯ ಸರಬರಾಜುಗಳನ್ನು ಹೆಚ್ಚಿಸಲು, ಹಾಗೂ ಭಾರತದಿಂದ ಹೊರದೇಶಗಳಿಗೆ ರಫ್ತಾಗುವ ಬಾಸುಮತಿ ಅಲ್ಲದ ಅಕ್ಕಿಯ ಮೇಲೆ ಶೇ 20 ರಫ್ತು ಸುಂಕವನ್ನು ಕೇಂದ್ರ ಸರ್ಕಾರ ವಿಧಿಸಿದೆ. ಕುರಿತಂತೆ, ಗುರುವಾರವೇ ಅಧಿಕೃತ ಆದೇಶ ಹೊರಬಿದ್ದಿದೆ. ಹೊಸ ರಫ್ತು ತೆರಿಗೆಯು ಇಂದಿ ನಿಂದಲೇ ಸೆ. 9ರಿಂದ ಜಾರಿಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದರಿಂದ ಭಾರತದಲ್ಲಿ ಅಕ್ಕಿಯನ್ನು ಹೆಚ್ಚಾಗಿ ಬಳಸುವ ದಕ್ಷಿಣದ ರಾಜ್ಯಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಈಗಾಗಲೇ ಭತ್ತ ಇಳುವರಿ ಕಡಿಮೆಯಾಗಿರುವುದರಿಂದ ಮುಂಬರುವ ದಿನಗಳಲ್ಲಿ ಅಕ್ಕಿ ಬೆಲೆಯು ಗಗನಕ್ಕೇರುವುದನ್ನು ತಡೆಯಲು ಇದು ಸಹಾಯವಾಗುತ್ತದೆ ಎಂದು ಈ ಕ್ಷೇತ್ರದ ತಜ್ಞರು ಹೇಳಿದ್ದಾರೆ.
ಕೃಷಿ ಸಚಿವಾಲಯ ಬಿಡುಗಡೆ ಮಾಡಿರುವ ಇತ್ತೀಚಿನ ಮಾಹಿತಿ. ಚೀನಾದ ನಂತರ ವಿಶ್ವದ ಎರಡನೇ ಅತಿದೊಡ್ಡ ಅಕ್ಕಿ ಉತ್ಪಾದಕ ಭಾರತವು ಜಾಗತಿಕ ವ್ಯಾಪಾರದಲ್ಲಿ ಶೇ 40ರಷ್ಟು ಪಾಲನ್ನು ಹೊಂದಿದೆ.