ನವದೆಹಲಿ, ಸೆ 07 (DaijiworldNews/HR): ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ(ಎನ್ಎಸ್ಇ ) ಮಾಜಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ(ಸಿಇಒ) ಹಾಗೂ ವ್ಯವಸ್ಥಾಪಕ ನಿರ್ದೇಶಕ ರವಿ ನಾರಾಯಣ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರೊಗಳು ಬಂಧಿಸಿದ್ದಾರೆ.
1994ರ ಏಪ್ರಿಲ್ನಿಂದ 2013ರ ಮಾರ್ಚ್ 31ರವರೆಗೆ ರವಿ ನಾರಾಯಣ್ ಅವರು ಎನ್ಎಸ್ಇಯ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ನಂತರ 2013ರಿಂದ 2017ರವರೆಗೆ ಅವರನ್ನು ಕಾರ್ಯಕಾರಿಯೇತರ ಉಪ ಮುಖ್ಯಸ್ಥರಾಗಿ ನೇಮಕವಾಗಿದ್ದರು.
ಇನ್ನು ರವಿ ನಾರಾಯಣ್ ಅವರ ಬಂಧನಕ್ಕೂ ಮೊದಲು ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಎನ್ಎಸ್ಇಯ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಚೈತ್ರ ರಾಮಕೃಷ್ಣನ್ ಅವರನ್ನು ಬಂಧಿಸಿದ್ದಾರೆ.