ಬೆಂಗಳೂರು, ಆ 16 (daijiworldNews/HR): ರಾಷ್ಟ್ರಧ್ವಜ ಬದಲಿಸುತ್ತೇವೆ ಎಂದಿದ್ದ ಬಿಜೆಪಿ ತಿರಂಗಾಕ್ಕೆ ಹತ್ತು ಹಲವು ಬಗೆಯಲ್ಲಿ ಅವಮಾನ ಮಾಡುತ್ತಿದೆ. ರಾಷ್ಟ್ರಧ್ವಜವನ್ನು ಹೀನಾಯವಾಗಿ ಎಸೆಯುವ ಬಿಜೆಪಿ ತಮ್ಮನ್ನು ತಾವು ರಾಷ್ಟ್ರವಾದಿಗಳು ಎಂದು ಕರೆದುಕೊಳ್ಳುವಂತಹ ವ್ಯಂಗ್ಯ ಬೇರಿಲ್ಲ! ಬಿಜೆಪಿ ರಾಷ್ಟ್ರಕ್ಕೆ ತಗುಲಿದ ವ್ಯಾದಿಗಳೇ ಹೊರತು ರಾಷ್ಟ್ರವಾದಿಗಳಲ್ಲ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ದೇಶದ್ರೋಹಿ ಆರ್ಎಸ್ಎಸ್ ತತ್ವ ಸಿದ್ಧಾಂತದಂತೆ ಕೆಲಸ ಮಾಡುತ್ತೇನೆ ಎಂದಿದ್ದಾರೆ ಸಿಎಂ. ಬಸವರಾಜ ಬೊಮ್ಮಾಯಿ ಅವರೇ, ತಾವು ಸಂವಿಧಾನದ ಆಶಯಗಳ ಮೇಲೆ ಆಡಳಿತ ನಡೆಸಬೇಕಿತ್ತು. ಅಂಬೇಡ್ಕರ್ ತತ್ವಗಳಲ್ಲಿ ಕೆಲಸ ಮಾಡಬೇಕಿತ್ತು. ಪ್ರಜಾಪ್ರಭುತ್ವದ ಅದರ್ಶದಲ್ಲಿ ನಡೆಯಬೇಕಿತ್ತು. ಆದರೆ ಪ್ರಜಾಪ್ರಭುತ್ವ ವಿರೋಧಿಗಳೇ ನಿಮಗೆ ಆದರ್ಶ ಎನ್ನುವುದು ರಾಜ್ಯದ ದೌರ್ಭಾಗ್ಯ ಎಂದು ವಾಗ್ದಾಳಿ ನಡೆಸಿದೆ.
ಇನ್ನು ಗೃಹಸಚಿವರ ತವರು ಜಿಲ್ಲೆಯಲ್ಲೇ ನಿರಂತರವಾಗಿ ಗಲಭೆ ನಡೆಯುತ್ತಿದ್ದರೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕನಿಷ್ಠ ಪ್ರಯತ್ನ ಮಾಡದಿರುವುದು ಸಚಿವರ ಅಸಾಮರ್ಥ್ಯವೋ ಅಥವಾ ಕೋಮು ಕಲಹಕ್ಕೆ ನೀಡುತ್ತಿರುವ ಉದ್ದೇಶಪೂರ್ವಕ ಕುಮ್ಮಕ್ಕೊ? ಬಿಜೆಪಿ ಶಿವಮೊಗ್ಗದಲ್ಲಿ ಕೋಮು ರಾಜಕೀಯದ ಪ್ರಯೋಗಶಾಲೆಯ ಬ್ರಾಂಚ್ ತೆರೆದಿರುವಂತಿದೆ ಎಂದು ಕಿಡಿಕಾರಿದೆ.