ಚಿಕ್ಕಮಗಳೂರು, ಆ 09 (DaijiworldNews/HR): ಮಳೆಯಿಂದಾಗಿ ನದಿ ಹಳ್ಳಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಕಾರಿನ ಸಮೇತ ಹಳ್ಳದಲ್ಲಿ ಮೂವರು ಕೊಚ್ಚಿ ಹೋಗಿ, ಅದರಲ್ಲಿ ಓರ್ವ ಮೃತಪಟ್ಟ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಮೃತರನ್ನು ಪ್ರಸನ್ನ(51 ) ಎಂದು ಗುರುತಿಸಲಾಗಿದೆ.
ಚಿಕ್ಕಮಗಳೂರಿನ ಎನ್ಆರ್ ಪುರದಲ್ಲಿ ಕಾರಿನ ಸಮೇತ ಮೂವರು ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಅದರಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ.
ಇನ್ನು ಭಾರಿ ಮಳೆ ಹಾಗೂ ಹಳ್ಳದಲ್ಲಿ ನೀರಿನ ರಭಸ ಹೆಚ್ಚಿರುವುದರಿಂದ ಪ್ರಸನ್ನ ಅವರ ಶೋಧಕ್ಕೂ ಅಡ್ಡಿಯುಂಟಾಗಿದೆ.