ನವದೆಹಲಿ, ಆ 05 (DaijiworldNews/MS): ರಾಷ್ಟ್ರಪತಿ ಚುನಾವಣೆಯ ನಂತರ, ಚುನಾವಣಾ ಆಯೋಗವು16 ನೇ ಉಪರಾಷ್ಟ್ರಪತಿ ಚುನಾವಣೆಯನ್ನು ನಾಳೆ ಅಂದರೆ ಆಗಸ್ಟ್ 6 ರಂದು ಕೈಗೊಂಡಿದೆ.
ಹಾಲಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಆಗಸ್ಟ್ 10ಕ್ಕೆ ಕೊನೆಗೊಳ್ಳಲಿದೆ. ಈ ಬಾರಿ ಉಪರಾಷ್ಟ್ರಪತಿ ಹುದ್ದೆಗೆ ಎನ್ಡಿಎ ಅಭ್ಯರ್ಥಿಯಾಗಿ ಜಗದೀಪ್ ಧಂಖರ್ ಮತ್ತು ಯುಪಿಎ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವ ಕಣದಲ್ಲಿದ್ದಾರೆ.
ಬಲಾಬಲದ ಲೆಕ್ಕಾಚಾರದಂತೆ ಎನ್ ಡಿ ಎ ಅಭ್ಯರ್ಥಿ ಸುಲಭ ಗೆಲುವು ದಾಖಲಿಸುವ ನಿರೀಕ್ಷೆ ಇದೆ. ಸುಮಾರು 18 ಪಕ್ಷಗಳು ಆಳ್ವಾ ಅವರನ್ನು ಬೆಂಬಲಿಸುತ್ತಿದ್ದರೆ, 20 ಪಕ್ಷಗಳು ಧಂಖರ್ ಅವರನ್ನು ಬೆಂಬಲಿಸುತ್ತಿವೆ. ಈ ಲೆಕ್ಕಾಚಾರದಂತೆ ಚುನಾವಣೆಯಲ್ಲಿ ಅಡ್ಡ ಮತದಾನವನ್ನು ಗಮನದಲ್ಲಿಟ್ಟುಕೊಳ್ಳದಿದ್ದರೆ ಎನ್ಡಿಎ ಅಭ್ಯರ್ಥಿ ಹೆಚ್ಚು ಮತಗಳನ್ನು ಗಳಿಸುವ ಸಾಧ್ಯತೆಯಿದೆ.
ಇನ್ನು ಉಪ ರಾಷ್ಟ್ರಪತಿ ಚುನಾವಣೆಯ ಮತದಾನದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಭಾಗಿಯಾಗುವುದಿಲ್ಲ ಎಂದು ಹೇಳಿದೆ.