ಮುಂಬೈ, ಆ 03 (DaijiworldNews/MS): ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವನ್ನು "ದೇಶದ್ರೋಹಿಗಳ ಸರ್ಕಾರ" ಎಂದು ಕರೆದ ಶಿವಸೇನೆ ನಾಯಕ ಆದಿತ್ಯ ಠಾಕ್ರೆ, ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಶಿಂಧೆ ಟೀಂ , ಉದ್ಧವ್ ಠಾಕ್ರೆ ಅವರ ಸರ್ಕಾರವನ್ನು ಪತನಗೊಳಿಸಿದ ನಂತರ ಸತಾರಾ ಜಿಲ್ಲೆಯ ಪಟಾನ್ನಲ್ಲಿ ನಡೆದ ರ್ಯಾಲಿಯಲ್ಲಿ ಮಂಗಳವಾರ ಮಾತನಾಡಿದ ಆದಿತ್ಯ ಠಾಕ್ರೆ , " ಮಹಾರಾಷ್ಟ್ರದಲ್ಲಿ ಜೂನ್ 20 ರಿಂದ ಶಿಂಧೆ ಟೀಂ ಮಾಡಿದ ದ್ರೋಹ ಬಯಲಾಗುತ್ತಿದೆ. ಇದೊಂದು ಅನಧಿಕೃತ, ಅಸಾಂವಿಧಾನಿಕ ದೇಶದ್ರೋಹಿಗಳ ಸರ್ಕಾರವಾಗಿದ್ದು ಶೀಘ್ರವೇ ಪತನವಾಗಲಿದೆ" ಎಂದು ಆದಿತ್ಯ ಠಾಕ್ರೆ ಭವಿಷ್ಯ ನುಡಿದಿದ್ದಾರೆ.
ಶಿವಸೇನಾ ನಾಯಕತ್ವದ ವಿರುದ್ಧ ಬಂಡಾಯವೆದ್ದು 33 ದೇಶಗಳಲ್ಲಿ ಸುದ್ದಿಯಾಗಿದೆ ಎಂಬ ಏಕನಾಥ್ ಶಿಂಧೆ ಬಣದ ಹೇಳಿಕೆಯನ್ನು ಲೇವಡಿ ಮಾಡಿದ ಅವರು, ಕ್ರಾಂತಿ ಮತ್ತು ದಂಗೆ ಮಾಡಲು, ಧೈರ್ಯ ಬೇಕು, ಆದರೆ ಈ ಜನರಿಗೆ ಅದು ಇಲ್ಲ" ಎಂದು ಕುಹಕವಾಡಿದ್ದಾರೆ