ಬೆಂಗಳೂರು, ಜು 25 (DaijiworldNews/SM): ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರ 20 ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದೆ. ಕೆಲವು ದಿನಗಳ ಹಿಂದೆ ಎಲ್ಲಾ 22 ನಿಮಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ರದ್ದು ಮಾಡಲಾಗಿತ್ತು.
ಸೋಮವಾರ ಕರ್ನಾಟಕ ಸರ್ಕಾರ 20 ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ ಆದೇಶವನ್ನು ಹೊರಡಿಸಿದೆ. ಈ ಮೂಲಕ ಬಸವರಾಜ ಬೊಮ್ಮಾಯಿ ಒಂದು ವರ್ಷ ಪೂರ್ಣಗೊಳಿಸುವಾಗ ಹಲವಾರು ನೇಮಕಾತಿಗಳನ್ನು ಮಾಡಲಾಗಿದೆ.
ಪ್ರಕಟವಾದ ಆದೇಶದ ಪ್ರಕಾರ ಯಾರಿಗೆ ಯಾವ ನಿಗಮದ ಅಧ್ಯಕ್ಷಗಿರಿ ಸಿಕ್ಕಿದೆ?. ಎಂಬ ಪಟ್ಟಿ ಇಲ್ಲಿದೆ ನೋಡಿ....
ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ - ಕೆ. ವಿ. ನಾಗರಾಜ * ಕರಕುಶಲ ಅಭಿವೃದ್ಧಿ ನಿಗಮ - ಮಾರುತಿ ಮಲ್ಲಪ್ಪ ಅಷ್ಟಗಿ
* ಕಾಡಾ -ತುಂಗಭದ್ರಾ ಯೋಜನೆ - ಕೊಲ್ಲಾಶೇಷಗಿರಿ ರಾವ್
* ಕಾಡಾ -ಕಾವೇರಿ ಜಲಾನಯನ ಯೋಜನೆ - ಜಿ. ನಿಜಗುಣರಾಜು
* ಮದ್ಯಪಾನ ಸಂಯಮ ಮಂಡಳಿ - ಮಲ್ಲಿಕಾರ್ಜುನ ಬಸವಣ್ಣಪ್ಪ ತುಬಾಕಿ
* ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ - ಎಂ. ಶರವಣ
* ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮ - ದೇವೇಂದ್ರನಾಥ್
* ಕಾಡುಗೊಲ್ಲ ಅಭಿವೃದ್ಧಿ ನಿಗಮ - ಚಂಗಾವರ ಮಾರಣ್ಣ
* ರಾಜ್ಯ ಮಾವು ಅಭಿವೃದ್ಧಿ ನಿಗಮ - ಎಂ. ಕೆ. ವಾಸುದೇವ
* ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ - ಎಂ. ಕೆ. ಶ್ರೀನಿವಾಸ್
* ದ್ರಾಕ್ಷಿ ಮತ್ತು ವೈನ್ ಬೋರ್ಡ್ -ಎಂ. ರವಿನಾರಾಯಣ ರೆಡ್ಡಿ
* ರೇಷ್ಮೆ ಮಾರಾಟ ಮಂಡಳಿ - ಬಿ. ಸಿ. ನಾರಾಯಣಸ್ವಾಮಿ
* ಲಿಂಬೆ ಅಭಿವೃದ್ಧಿ ಮಂಡಳಿ - ಚಂದ್ರಶೇಖರ ಕವಟಗಿ
* ರಾಜ್ಯ ಗೇರು ಅಭಿವೃದ್ಧಿ ನಿಗಮ - ಮಣಿರಾಜ ಶೆಟ್ಟಿ
* ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ - ಗೋವಿಂದ ಜಟ್ಟಪ್ಪ ನಾಯಕ
* ಮೈಸೂರು ಮೃಗಾಲಯ ಪ್ರಾಧಿಕಾರ - ಎಂ. ಶಿವಕುಮಾರ್
* ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ - ಎನ್. ರೇವಣಪ್ಪ ಕೊಳಗಿ
* ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ - ಕೆ. ಪಿ. ವೆಂಕಟೇಶ್
* ಹಿಂದೆ ನಿಗಮಗಳ ಅಧ್ಯಕ್ಷರಾಗಿದ್ದ ರಘು ಕೌಟಿಲ್ಯ ಮತ್ತು ಮಣಿರಾಜ ಶೆಟ್ಟಿ ಅವರಿಗೆ ಮತ್ತೆ ಅಧ್ಯಕ್ಷ ಸ್ಥಾನ ನೀಡಲಾಗಿದೆ.