ಬೆಂಗಳೂರು, ಜು 22(DaijiworldNews/DB): ರಮೇಶ್ಕುಮಾರ್ ಅವರನ್ನು ಪತ್ರಿಕೆಗಳಲ್ಲಿ ಮಾಯಿಲ್ ಮರಾಠಿ ಎನ್ನುತ್ತಿದ್ದರು. ನಮ್ಮ ಕೋಲಾರ ಭಾಗದಲ್ಲಿ ಇದರ ಅರ್ಥ ಮಂತ್ರವಾದಿ ಎಂಬುದಾಗಿದೆ ಎಂದು ಸಚಿವ ಡಾ. ಕೆ. ಸುಧಾಕರ್ ಲೇವಡಿ ಮಾಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ನಾಲ್ಕು ತಲೆಮಾರಿಗಾಗುವಷ್ಟು ಆಸ್ತಿಯನ್ನು ಕಾಂಗ್ರೆಸ್ನ ಪ್ರತಿಯೊಬ್ಬರೂ ಮಾಡಿದ್ದಾರೆ. ಸೋನಿಯಾ, ರಾಹುಲ್ ಹೆಸರಿನಲ್ಲಿಯೂ ಆಸ್ತಿ ಮಾಡಿದ್ದಾರಂತೆ. ಇನ್ನು ನಾನು ಹೇಳುವುದೇನಿದೆ ಎಂದವರು ಪ್ರಶ್ನಿಸಿದರು.
ಭ್ರಷ್ಟಾಚಾರ, ಹಗರಣಗಳ ಬಗ್ಗೆ ಅವರೇ ಹೇಳಿದ್ದಾರೆ. ಆಸ್ತಿ ಮಾಡಿರುವ ವಿಚಾರವನ್ನೂ ಹೇಳಿದ್ದಾರೆ. ಹಿರಿಯ ನಾಯಕರು ಸತ್ಯವನ್ನೇ ಹೇಳುತ್ತಾರೆ. ದೇಶದ ಯಾವುದೇ ಸ್ಪೀಕರ್ ಮಾಡದ ಘನಂದಾರಿ ಕೆಲಸವನ್ನು ರಮೇಶ್ಕುಮಾರ್ ಮಾಡಿದ್ದರು. ಲಂಕೇಶ್ ಪತ್ರಿಕೆಯ ದ್ವಾರಕನಾಥ್ ಅವರು ಮಾಯಿಲ್ ಮರಾಠಿ ಎಂದೇ ರಮೇಶ್ಕುಮಾರ್ಗೆ ಬಿರುದು ಕೊಟ್ಟಿದ್ದರು ಎಂದರು.