ಜೈಪುರ, ಜೂ 29 (DaijiworldNews/DB): ಟೈಲರ್ ಕನ್ನಯ್ಯಾ ಲಾಲ್ ಶಿರಚ್ಚೇದ ಘಟನೆ ಸಾಮಾನ್ಯವಾದುದಲ್ಲ. ಇದರ ಹಿಂದಿರುವ ಪಿತೂರಿಯನ್ನು ಶೀಘ್ರ ಪತ್ತೆ ಹಚ್ಚಲಾಗುವುದು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಹತ್ಯೆ ಹಿಂದೆ ಯಾರೆಲ್ಲಾ ಇದ್ದಾರೆ, ಪಿತೂರಿ ಮತ್ತು ಆರೋಪಿಗಳಿಗಿರುವ ಲಿಂಕ್ಗಳನ್ನು ಶೀಘ್ರ ಕಂಡು ಹಿಡಿಯಲಾಗುವುದು. ಘಟನೆ ಸಂಬಂಧ ಇಂದು ಸಭೆ ಕರೆಯಲಾಗಿದ್ದು, ಸಭೆ ಮುಗಿದ ಬಳಿಕ ಮಾಹಿತಿಗಳನ್ನು ನೀಡಲಾಗುವುದು ಎಂದರು.
ರಾಜ್ಯಸ್ಥಾನದ ಹೆಚ್ಚುವರಿ (ಎಸಿಬಿ) ಡಿಜಿಪಿ ದಿನೇಶ್ ಎಂ.ಎನ್. ಮಾತನಾಡಿ, ಬಂಧಿತ ಆರೋಪಿಗಳನ್ನು ಈಗಾಗಲೇ ವಿಚಾರಣೆಗೊಳಪಡಿಸಲಾಗಿದೆ. ಆರೋಪಿ ನೀಡುವ ಮಾಹಿತಿ ಆಧರಿಸಿ ಇನ್ನಷ್ಟು ವಿಷಯ ಕಲೆ ಹಾಕಲಾಗುವುದು. ಇನ್ನಷ್ಟು ಬಂಧಿ ಭಾಗಿಯಾಗಿರುವ ಸಾಧ್ಯತೆ ಇದ್ದು, ಎಲ್ಲರ ವಿರುದ್ದವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಜನ ಸಹಕರಿಸಬೇಕು ಎಂದು ಮನವಿ ಮಾಡಿದರು.