ನವದೆಹಲಿ, ಜೂ 20 (DaijiworldNews/MS): ಪ್ರಧಾನಿ ನರೇಂದ್ರ ಮೋದಿ ಅವರು ಅಡಾಲ್ಫ್ ಹಿಟ್ಲರ್ನಂತೆ ವರ್ತಿಸುತ್ತಿದ್ದು, ಜರ್ಮನ್ ಸರ್ವಾಧಿಕಾರಿಯ ಮಾರ್ಗವನ್ನು ಅನುಸರಿಸಿದರೆ "ಹಿಟ್ಲರ್ನಂತೆ ಸಾಯುತ್ತಾರೆ" ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸುಬೋಧ್ ಕಾಂತ್ ಸಹಾಯ್ ಸೋಮವಾರ ಹೇಳಿದ್ದಾರೆ.
ಜಂತರ್ ಮಂಥರ್ ನಲ್ಲಿ ನಡೆದ ‘ಸತ್ಯಾಗ್ರಹ’ ಪ್ರತಿಭಟನೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಹಾಯ್, ಬಿಜೆಪಿ ಆಡಳಿತವನ್ನು “ಲೂಟಿಕೋರರ” ಸರ್ಕಾರ ಎಂದು ಕರೆದಿದ್ದಾರೆ.
''ಇದು ಲೂಟಿಕೋರರ ಸರಕಾರ. ಮೋದಿ ಅವರು ರಿಂಗ್ ಮಾಸ್ಟರ್ನಂತೆ ವರ್ತಿಸುತ್ತಿದ್ದು, ಸರ್ವಾಧಿಕಾರಿ ಪಾತ್ರವನ್ನು ಅಳವಡಿಸಿಕೊಂಡಿದ್ದಾರೆ. ಮೋದಿ ಹಿಟ್ಲರ್ನನ್ನೂ ಮೀರಿಸಿದ್ದಾನೆಂದು ನನಗೆ ಅನಿಸುತ್ತದೆ. ಹಿಟ್ಲರ್ ಸೇನೆಯೊಳಗೇ ‘ಖಾಕಿ’ ಎಂಬ ಸಂಘಟನೆಯನ್ನೂ ರಚಿಸಿದ್ದ. ಮೋದಿ ಹಿಟ್ಲರ್ನ ಹಾದಿ ಹಿಡಿದರೆ ಹಿಟ್ಲರ್ನಂತೆ ಸಾಯುತ್ತಾರೆ, ಇದನ್ನು ನೆನಪಿಟ್ಟುಕೊಳ್ಳಿ ಎಂದು ಹೇಳಿದ್ದಾರೆ
ಆದರೆ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಕಾಂಗ್ರೆಸ್, ಪ್ರಧಾನಿ ವಿರುದ್ಧ ಯಾವುದೇ ಅಸಭ್ಯ ಟೀಕೆಗಳನ್ನು ಅನುಮೋದಿಸುವುದಿಲ್ಲ ಎಂದು ಹೇಳಿದೆ.