ಕೋಲ್ಕತ್ತಾ, ಜೂ 17 (DaijiworldNews/HR): ಒಬ್ಬ ವ್ಯಕ್ತಿ ತಡರಾತ್ರಿ ದಕ್ಷಿಣ ಕೋಲ್ಕತ್ತಾದ ಬಾನ್ಸ್ದ್ರೋನಿ ಸ್ಟೇಷನ್ನಲ್ಲಿ ಪೊಲೀಸರ ಮುಂದೆ ಹಾಜರಾಗಿ ತನ್ನ ಸಹೋದರನನ್ನು ಕೊಂದ ಬಗ್ಗೆ ಸುಳ್ಳು ತಪ್ಪೊಪ್ಪಿಗೆಯನ್ನು ನೀಡಿರುವ ಘಟನೆ ಕೋಲ್ಕತ್ತಾದ ಬಾನ್ಸ್ದ್ರೋನಿಯ ನಿರಂಜನ್ ಪಲ್ಲಿಯಲ್ಲಿ ನಡೆದಿದೆ.
ನನ್ನ ಅಣ್ಣನನ್ನು ನಾನು ಕೊಂದಿದ್ದೇನೆ, ನನ್ನನ್ನು ಬಂಧಿಸಿ ಎಂದು ಕೂಗುತ್ತಿದ್ದ ವ್ಯಕ್ತಿಯನ್ನು ಕಂಡ ಪೊಲೀಸ್ ತಂಡ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಶವಪರೀಕ್ಷೆ ಮಾಡಿದಾಗ ಆ ವ್ಯಕ್ತಿಯನ್ನು ಕೊಲಾಯಾಗಿದ್ದಿಲ್ಲ, ಬದಲಿಗೆ ಸೆರೆಬ್ರಲ್ ಸ್ಟ್ರೋಕ್ನಿಂದ ಮೃತಪಡ್ಡಿದ್ದರು ಎನ್ನಲಾಗುತ್ತಿದೆ.
ಇನ್ನು ತನ್ನ ಸಾವಿನ ನಂತರ ತನ್ನ ನಿರುದ್ಯೋಗಿ ಸಹೋದರ ಹಸಿವಿನಿಂದ ಸಾಯುತ್ತಾನೆ ಎಂದು ಹೆದರಿದ ಅವನು ತನ್ನ ಸಹೋದರನಿಗೆ ಕೊಲೆಯ 'ಕಥೆ' ಹೇಳಿ ಪೊಲೀಸರಿಗೆ ಹೋಗಿ ಶರಣಾಗುವಂತೆ ಹೇಳಿದ್ದನಂತೆ.
ಮೃತರನ್ನು ದೇಬಾಶಿಸ್ ಚಕ್ರವರ್ತಿ (48) ಎಂದು ಗುರುತಿಸಲಾಗಿದ್ದು, ಇಲ್ಲಿ ಅವರು ತಮ್ಮ ಸಹೋದರ ಶುಭಾಶಿಸ್ ಅವರೊಂದಿಗೆ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದರು.