ರಾಜಸ್ಥಾನ, ಜೂ 16 (DaijiworldNews/HR): ರಾಜಸ್ಥಾನದಲ್ಲಿ ಹಾಲಿನ ಟ್ಯಾಂಕರ್ ಒಂದು ಉರುಳಿಬಿದ್ದಿದ್ದು, ಈ ವೇಳೆ ಪುಕ್ಕಟ್ಟೆ ಹಾಲು ತುಂಬಿಸಿಕೊಳ್ಳಲು ಜನ ಮುಗಿಬಿದ್ದ ಘಟನೆ ನಡೆದಿದೆ.
ಏಕಾಏಕಿ ನುಗ್ಗಿದ ಬೈಕ್ ಚಾಲಕನನ್ನು ತಪ್ಪಿಸಲು ಹೋಗಿ ಸಿರೋಹಿಯ ಸ್ವರೂಪ್ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4 ವೇ ಹೆದ್ದಾರಿಯಲ್ಲಿ ಹಾಲಿನ ಟ್ಯಾಂಕರ್ ಉರುಳಿಬಿದ್ದ ಘಟನೆ ನಡೆದಿದೆ.
ಇನ್ನು ಉರುಳಿಬಿದ್ದ ಟ್ಯಾಂಕರ್ ನಿಂದ ಹಾಲು ಸುರಿಯುತ್ತಿದ್ದಂತೆ ಜನ ಬಾಟಲ್, ಕೊಡಪಾನ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಬಂದು ಹಾಲು ತುಂಬಿಸಿಕೊಂಡಿದ್ದಾರೆ.