ಭುವನೇಶ್ವರ, ಜೂ 15 (DaijiworldNews/MS): 110 ಗಂಟೆಗಳ ಪರಿಶ್ರಮದ ನಂತರ ಕರ್ಗತ್ತಲಿನ , ನೀರು ತುಂಬಿದ ಬೋರ್ವೆಲ್ನಲ್ಲಿ 80 ಅಡಿ ಆಳದಲ್ಲಿ ಸಿಲುಕಿದ್ದ ರಾಹುಲ್ ಸಾಗುವನ್ನು ಸೇನಾ ಸಿಬ್ಬಂದಿ ಅಂತಿಮವಾಗಿ ಮಂಗಳವಾರ ಮಧ್ಯರಾತ್ರಿಯ ಮೊದಲು ಹೊರತೆಗೆದಿದ್ದಾರೆ. 10 ವರ್ಷದ ರಾಹುಲ್ ಸಾಹುರನ್ನು ಸುರಂಗದ ಬಾವಿಯಿಂದ ಹೊರತೆಗೆದ ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ನಂತರ ಅವರನ್ನು ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಬೋರ್ ವೆಲ್ ನಿಂದ ಹೊರತೆಗೆದ ತಕ್ಷಣ ಮಾತು ಮತ್ತು ಶ್ರವಣದೋಷವುಳ್ಳ ಮಗುವಿಗೆ ಸುತ್ತ ನೆರೆದವರ ಹರ್ಷೋದ್ಗಾರ ಕೇಳಲು ಸಾಧ್ಯವಾಗಲಿಲ್ಲ, ಆದರೆ ವಿಶಾಲವಾದ ತೆರೆದ ಕಣ್ಣುಗಳಿಂದ ಸುತ್ತಮುತ್ತ ನೆರೆದಿದ್ದ ಜನರಲ್ಲಿ ಆನಂದಬಾಷ್ಪವನ್ನು ತನ್ನ ಕಣ್ಣುತುಂಬಿಕೊಂಡನು.
300 ಅಧಿಕಾರಿಗಳು ಮತ್ತು ನೌಕರರ ತಂಡ ಐದು ದಿನಗಳ ಕಾಲ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿತ್ತು. ರಾಹುಲ್ರನ್ನು ಸ್ಥಳಾಂತರಿಸುವ ಮುನ್ನವೇ ವೈದ್ಯಕೀಯ ತಂಡ ಮತ್ತು ಆಂಬ್ಯುಲೆನ್ಸ್ನ್ನು ಸಿದ್ಧಪಡಿಸಲಾಗಿತ್ತು. ಘಟನಾ ಸ್ಥಳದಿಂದ ಆಸ್ಪತ್ರೆವರೆಗೆ ಹಸಿರು ಕಾರಿಡಾರ್ ಕೂಡ ಮೊದಲೇ ಮಾಡಿದ್ದರಿಂದ ತಡಮಾಡದೆ ಚಿಕಿತ್ಸೆ ಸಿಗುತ್ತಿದೆ. ರಾಹುಲ್ ಅವರ ತಾಯಿ ಆಸ್ಪತ್ರೆಗೆ ತೆರಳಿದ್ದಾರೆ.
ಹಾವು, ಕಪ್ಪೆಗಳೊಂದಿಗಿದ್ದ ರಾಹುಲ್
ಮಗುವಿನ ಧೈರ್ಯ ಮತ್ತು ಸ್ಥಿತಪ್ರಜ್ಞತೆಯೇ ರಕ್ಷಣಾ ತಂಡಕ್ಕೆ ಕಾರ್ಯಾಚರಣೆಯ ಯಶಸ್ವಿಗೊಳಿಸುವ ಭರವಸೆಯನ್ನು ಸುಮಾರು ಐದು ದಿನಗಳವರೆಗೆ ನೀಡಿತು. ಬೋರ್ವೆಲ್ನಲ್ಲಿ ರಾಹುಲ್ ಜೊತೆಗೆ ಹಾವು , ಕಪ್ಪೆಗಳು ಇದ್ದು ಈ ವಿಚಾರ ಈಗ ಹಂಚಿಕೊಳ್ಳುತ್ತಿದ್ದೇನೆ. ಆತ ಅದರೊಂದಿಗೆ ಹೋರಾಡಿದ್ದ ಎಂಬ ಆಲೋಚನೆಯು ನನ್ನನ್ನು ಒಳಗಿನಿಂದ ಭೀತಗೊಳಿಸುತ್ತದೆ ಎಂದು ಕಾರ್ಯಾಚರಣೆಯ ವೇಳೆ ಸ್ಥಳದಲ್ಲೇ ಇದ್ದ ಜಿಲ್ಲಾಧಿಕಾರಿ ಜಿತೇಂದ್ರ ಶುಕ್ಲಾ ಪ್ರತಿಕ್ರಿಯಿಸಿದ್ದಾರೆ.
ಏರುತ್ತಿತ್ತು ನೀರಿನ ಮಟ್ಟ:
ಒಂದೆಡೆ ನೀರಿನ ಮಟ್ಟ ಏರುತ್ತಿತ್ತಿದ್ದು, ಇನ್ನೊಂದೆಡೆ ಹುಡುಗನಿಂದ ಕೇವಲ ಒಂದು ಮೀಟರ್ ದೂರದಲ್ಲಿ ಕಲ್ಲಿನ ಗೋಡೆ ಕಾರ್ಯಾಚರಣೆಗೆ ಅಡ್ಡಿಪಡಿಸಿತು. ಇನ್ನೊಂದೆಡೆ ರಾಹುಲ್ ನಿಮಿಷಕ್ಕೂ ದುರ್ಬಲವಾಗುತ್ತಿದ್ದು, ಪರಿಸ್ಥಿತಿ ಸಾಕಷ್ಟು ಹತಾಶವಾಗಿತ್ತು. ಬಂಡೆಗಳ ಬೃಹತ್ ಬ್ಲಾಕ್ಗಳಿಂದ ಇದ್ದುದರಿಂದ ತಂಡವು ಆತುರವಾಗಿ ಕೆಲಸಮುಗಿಸಲು ಸಾಧ್ಯವಿರಲಿಲ್ಲ. ಭಾರೀ ಯಂತ್ರಗಳನ್ನು ಬಳಸಿದಾಗ ಭೂಮಿ ಕಂಪಿಸುತ್ತಿತ್ತು ಮತ್ತು ಬಲವಾದ ಕಂಪನಗಳು ರಾಹುಲ್ಗೆ ಭಯ ಹುಟ್ಟಿಸುತ್ತಿದ್ದವು ಹೀಗಾಗಿ ಬಂಡೆಗಳ ತೆರವಿಗಾಗಿ ಸಣ್ಣ ಡ್ರಿಲ್ಗಳನ್ನು ಬಳಸಲಾಯಿತು.
ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ 80 ಅಡಿ ಆಳದ ಬೋರ್ವೆಲ್ನಲ್ಲಿ ಸಿಕ್ಕಿಬಿದ್ದ ರಾಹುಲ್ ಸೋಮವಾರದ ಬಳಿಕ ತೀರಾ ದುರ್ಬಲಗೊಂಡಿದ್ದ, ಮಂಗಳವಾರ, ಅವರ ಪ್ರತಿಕ್ರಿಯೆಗಳು ದುರ್ಬಲಗೊಂಡವು, ಹಗ್ಗದ ಮೂಲಕ ನೀಡಲಾದ ಆಹಾರವನ್ನು ಸ್ವೀಕರಿಸಿರಲಿಲ್ಲ.ಆದರೆ ಅವರು ಪ್ರತಿ ಬಾರಿಯೂ ರಕ್ಷಣಾ ತಂಡಕ್ಕೆ ಪ್ರತಿಕ್ರಿಯಿಸಲು ಪ್ರಯತ್ನಿಸುತ್ತಿದ್ದ
ಪ್ರತಿ ಬಾರಿಯೂ ರಾಹುಲ್ ಸ್ವಲ್ಪ ಚಲನೆ ರಕ್ಷಣಾತಂಡದ ಮನೋಬಲ ಹೆಚ್ಚುತ್ತಿತ್ತು. " ಬಾಲಕ ಚಲಿಸುತ್ತಿದ್ದಾನೆ, ನಾವು ಚಲಿಸೋಣ" ಎಂಬ ಕೂಗೂ ಮುಗಿಲುಮುಟ್ಟುತ್ತಿತ್ತು. ಬೋರ್ವೆಲ್ಗೆ ಇಳಿಸಲಾಗಿದ್ದ ಕ್ಯಾಮೆರಾಗಳು, ಕತ್ತಲೆಯಾದ ಒದ್ದೆಯಾದ ಬೋರ್ವೆಲ್ನಲ್ಲಿ ಅಲುಗಾಡಲು ಜಾಗವಿಲ್ಲದೆ ರಾಹುಲ್ ತನ್ನ ಕುಳಿತಿರುವುದನ್ನು ತೋರಿಸುತ್ತಿತ್ತು. ಸೋಮವಾರ ಬೋರ್ವೆಲ್ನಲ್ಲಿ ನೀರು ತುಂಬಿದ್ದರಿಂದ ರಾಹುಲ್ನ ದೇಹದ ಅರ್ಧಕ್ಕೂ ಹೆಚ್ಚು ಭಾಗ ನೀರಿನಲ್ಲಿ ಮುಳುಗಿತ್ತು. ಜಿಲ್ಲಾಧಿಕಾರಿ ತಕ್ಷಣವೇ ಹತ್ತಿರದ ಎರಡು ಅಣೆಕಟ್ಟುಗಳನ್ನು ತೆರೆಯಲು ಅಧಿಕಾರಿಗಳಿಗೆ ಆದೇಶಿಸಿದರು . ಇದಲ್ಲದೆ ತಮ್ಮ ಬೋರ್ಗಳನ್ನು ಹೆಚ್ಚು ಹೆಚ್ಚು ಬಳಸಿಕೊಳ್ಳಲು ಗ್ರಾಮಸ್ಥರಲ್ಲಿ ಮನವಿ ಮಾಡಿದರು. ನೀರಿನ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡಿತು.
ಮಂಗಳವಾರ ರಾಹುಲ್ "ಗುಹೆಯಂತಹ ಆಳ" ಕ್ಕೆ ಜಾರಿದ್ದು ಆತನನ್ನು ತಲುಪುವುದು ಇನ್ನೂ ದೊಡ್ಡ ಸವಾಲಾಗಿತ್ತು. ಕೊನೆಗೂ ಕಾರ್ಯಾಚರಣೆ ಯಶಸ್ವಿಯಾಗಿ ಸಾಗಿದೆ ಸುಮಾರು ಐದು ದಿನಗಳ ಕಾಲ ನೀರಿನಲ್ಲಿದ್ದ ನಂತರ ರಾಹುಲ್ ಉಸಿರಾಡುತ್ತಿದ್ದು, ಚರ್ಮದ ಸೋಂಕು ಕಾಣಿಸಿಕೊಂಡಿದೆ. ಶೀಘ್ರ ಗುಣಮುಖರಾಗುವ ಭರವಸೆ ಇದೆ ಎಂದು ಶುಕ್ಲಾ ಹೇಳಿದ್ದಾರೆ.
ಸುದೀರ್ಘ ರಕ್ಷಣಾ ಕಾರ್ಯಾಚರಣೆಯ ನಂತರ ರಾಹುಲ್ ಸುರಕ್ಷಿತವಾಗಿ ಹೊರತೆಗೆದ ರಕ್ಷಣಾ ತಂಡದಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳು ಮತ್ತು ನೌಕರರನ್ನು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅಭಿನಂದಿಸಿದ್ದಾರೆ
ಆಟವಾಡುತ್ತಿದ್ದಾಗ ಬೋರ್ವೆಲ್ಗೆ ಬಿದ್ದಿದ್ದ ರಾಹುಲ್
ಪಿಹ್ರಿದ್ ಗ್ರಾಮದ ರಾಹುಲ್ ಶುಕ್ರವಾರ ಮಧ್ಯಾಹ್ನ ಮನೆಯ ಹಿಂದೆ ಆಟವಾಡುತ್ತಿದ್ದಾಗ ಬೋರ್ವೆಲ್ ಹೊಂಡಕ್ಕೆ ಬಿದ್ದಿದ್ದರು. ಘಟನೆಯ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಲಭಿಸಿದ ತಕ್ಷಣ ಸಂಜೆಯಿಂದಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಜಿಲ್ಲಾಧಿಕಾರಿ ಜಿತೇಂದ್ರ ಶುಕ್ಲಾ ನೇತೃತ್ವದ ಜಿಲ್ಲಾಡಳಿತ ತಂಡ ಪಿಹ್ರಿದ್ ಗ್ರಾಮಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು.