ಬೆಂಗಳೂರು, ಜೂ 14 (DaijiworldNews/HR): ಬಿಜೆಪಿಯವರೇನು ಸ್ವಾತಂತ್ರ್ಯ ಹೋರಾಟಗಾರರೇ? ಇಡಿ ತನಿಖೆಯನ್ನ ಮಾಡಲಿ. ನನ್ನದೇನೂ ಅಭ್ಯಂತರ ಇಲ್ಲ. ಆದರೆ ರಾಜಕೀಯ ದುರುದ್ದೇಶದಿಂದ ಮತ್ತೆ ಪ್ರಕರಣವನ್ನ ತೆರೆದು ದ್ಚೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿಯುತ ಧರಣಿಗೆ ಅವಕಾಶ ಕೊಡಬೇಕು. ಇದೇನು ಪ್ರಜಾಪ್ರಭುತ್ವವೇ ? ಪೋಲಿಸ್ ರಾಜ್ಯವೇ ? ಸರ್ವಾಧಿಕಾರವೇ?ನಮ್ಮವರೇನು ಕಾನೂನನ್ನ ಕೈಗೆತ್ತಿಕೊಂಡಿದ್ದರಾ ? ದೇಶದಲ್ಲಿ ಏನು ತುರ್ತು ಪರಿಸ್ಥಿತಿ ಇದೆಯಾ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಬಿಜೆಪಿಯು ದ್ಚೇಷದ ರಾಜಕಾರಣ ಮಾಡುತ್ತಿದ್ದು, ಇದನ್ನ ಪ್ರತಿಭಟಿಸಬಾರದಾ? ಅವರಿಗೆ ಪ್ರಜಾಪ್ರಭುತ್ವ, ಸಂವಿಧಾನ, ಮೂಲಭೂತ ಹಕ್ಕು ಯಾವುದೂ ಗೊತ್ತಿಲ್ಲ. ಇವರೇನು ಓದಿಕೊಂಡಿದ್ದಾರಾ ?ಎಮರ್ಜಿಸಿಯನ್ನ ಘೋಷಿಸದೆ ಬಂಧಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.