ಒಡಿಶಾ, ಜೂ 14 (DaijiworldNews/MS): ವಯಸ್ಸಾದ ತಂದೆಯೊಬ್ಬ, ನಿರುದ್ಯೋಗಿಯಾಗಿದ್ದ 40 ವರ್ಷದ ಮಗನನ್ನು ಕಟ್ಟಿಹಾಕಿ ಮಧ್ಯಾಹ್ನದ ಸುಡುವ ಬಿಸಿಲಲ್ಲಿ ನಿಲ್ಲಿಸಿದ ಪರಿಣಾಮ ಪುತ್ರ ಸಾವನ್ನಪ್ಪಿದ ಘಟನೆ ಭಾನುವಾರ ಒಡಿಶಾದ ಕಿಯೋಂಜಾರ್ ಜಿಲ್ಲೆಯ ಸನಮಸಿನಬೈಲ ಗ್ರಾಮದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಆರೋಪಿಯನ್ನು ಪನುವಾ ನಾಯಕ್ (65) ಎಂದು ಗುರುತಿಸಿದ್ದು, ಈತ ರಸ್ತೆ ಬದಿ ಆಹಾರ ಮಾರಾಟ ಮಾಡಿ ಬದುಕುತ್ತಿದ್ದ. ಮೃತ ವ್ಯಕ್ತಿಯನ್ನು ಪನುವಾ ನಾಯಕ್ ಪುತ್ರ ಸುಮಂತ್ ನಾಯಕ್ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಸೊಂಟ ಮುರಿತಕ್ಕೆ ಒಳಗಾದ ತಾಯಿಯನ್ನು ಹೊಡೆದಿದ್ದಕ್ಕಾಗಿ ಅರವತ್ತೆಂಟು ವರ್ಷದ ಪನುವಾ ನಾಯಕ್ ತನ್ನ ಮಗ ಸುಮಂತ್ಗೆ ಕಠಿಣ ಶಿಕ್ಷೆ ನೀಡಲು ಬಯಸಿದ್ದ
ಗುರುವಾರ ಮದ್ಯದ ಅಮಲಿನಲ್ಲಿದ್ದ ಸುಮಂತ್ ತನ್ನ ತಾಯಿಗೆ ಥಳಿಸಿದ್ದ ಮತ್ತು ಆಗಾಗ್ಗೆ ತನ್ನ ಹೆಂಡತಿಯನ್ನು ಹೊಡೆಯುತ್ತಿದ್ದ. ಶನಿವಾರ ಜಗಳ ಆರಂಭಿಸಿದಾಗ ಪನುವಾ ಮಗನಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿ ಕೈಕಾಲು ಕಟ್ಟಿ ಬಯಲಿನಲ್ಲಿ ಬಿಟ್ಟಿದ್ದಾನೆ. ಸುಮಂತ್ನ ಕೈ, ಕಾಲುಗಳನ್ನು ಪ್ಲಾಸ್ಟಿಕ್ ಹಗ್ಗದಿಂದ ಕಟ್ಟಿ ಅವನನ್ನು ಸುಡುವ ಸೂರ್ಯನ ಕೆಳಗೆ ಮಧ್ಯಾಹ್ನ 2 ಗಂಟೆಗೆ ಬಿಟ್ಟಿದ್ದು ಹನಿ ನೀರು ಕೊಟ್ಟಿರಲಿಲ್ಲ. ಇದು ಅವನ ಸಾವಿಗೆ ಕಾರಣವಾಗಿತ್ತು. ಕೊಯೆಂಜಾರ್ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 36.6 ಡಿಗ್ರಿ ಸೆಲ್ಸಿಯಸ್ನಷ್ಟಿದೆ. ಆರೋಪಿ ವಿರುದ್ದಕೊಲೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.
ಪನುವಾ ನಾಯಕ್ ತನ್ನ ಮಗನನ್ನು ಕೊಲೆ ಮಾಡಿದ ಬಗ್ಗೆ ಪಶ್ಚಾತ್ತಾಪವಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.