ಅಹಮದಾಬಾದ್, ಜೂ 12 (DaijiworldNews/DB): ವಾಟ್ಸಾಪ್ನಲ್ಲಿ ಹರಿದಾಡಿದ ವದಂತಿ ನಂಬಿ ಪೆಟ್ರೋಲ್ ಬಂಕ್ಗಳ ಮುಂದೆ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳು ತಡರಾತ್ರಿ ಸಾಲುಗಟ್ಟಿ ನಿಂತ ಘಟನೆ ಗುಜರಾತ್ನ ಅಹಮದಾಬಾದ್ನಲ್ಲಿ ಶನಿವಾರ ನಡೆದಿದೆ.
ಭಾನುವಾರದಿಂದ ಪೆಟ್ರೋಲ್ ಬಂಕ್ ಮಾಲಕರ ಮುಷ್ಕರ ಆರಂಭವಾಗಲಿದೆ. ಅಲ್ಲದೆ, ಸೌದಿ ಅರೇಬಿಯಾದಿಂದ ಭಾರತಕ್ಕೆ ತೈಲ ಸರಬರಾಜು ಸ್ಥಗಿತಗೊಂಡಿದೆ ಎಂಬ ವದಂತಿಯೊಂದು ಶನಿವಾರ ತಡರಾತ್ರಿ ವಾಟ್ಸಾಪ್ನಲ್ಲಿ ಹರಿದಾಡಿತ್ತು. ಇದನ್ನು ಸತ್ಯವೆಂದೇ ನಂಬಿದ ಜನ ರಾತ್ರೋರಾತ್ರಿ ಪೆಟ್ರೋಲ್ ಬಂಕ್ಗಳಿಗೆ ತಮ್ಮ ವಾಹನಗಳನ್ನು ತಂದು ಪೆಟ್ರೋಲ್, ಡೀಸೆಲ್ನ್ನು ಟ್ಯಾಂಕ್ ಫುಲ್ ತುಂಬಿಸಲು ಸಾಲುಗಟ್ಟಿ ನಿಂತಿದ್ದರು. ಈ ವೇಳೆ ಮುಷ್ಕರ ಇಲ್ಲ, ಸೌದಿಯಿಂದ ತೈಲ ಸರಬರಾಜು ಸ್ಥಗಿತಗೊಳಿಸಿಲ್ಲ ಎಂದು ಹೇಳಿದರೂ ಜನರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.
ಸಾಮಾಜಿಕ ಜಾಲತಾಣ ವಾಟ್ಸಾಪ್ನಲ್ಲಿ ಬಂದ ವದಂತಿಯೊಂದನ್ನು ನಂಬಿ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಚಾಲಕರು ಪೆಟ್ರೋಲ್ ಬಂಕ್ ಗಳ ಮುಂದೆ ತಡರಾತ್ರಿ ಸಾಲುಗಟ್ಟಿ ನಿಂತ ಘಟನೆ ಗುಜರಾತಿನ ಅಹಮದಾಬಾದ್ ನಲ್ಲಿ ನಡೆದಿದೆ. ರಾತ್ರಿ 11 ಗಂಟೆಯವರೆಗೆ ಕಾರ್ಯನಿರ್ವಹಿಸುವ ಪೆಟ್ರೋಲ್ ಬಂಕ್ಗಳ ಮುಂಭಾಗ ತಡರಾತ್ರಿಯವರೆಗೂ ವಾಹನ ಸಂದಣಿ ಇತ್ತು. ಇದರ ವೀಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.