ಬೆಂಗಳೂರು, ಜೂ 12 (DaijiworldNews/DB): ರಾಜ್ಯಸಭಾ ಚುನಾವಣೆ ಬಳಿಕ ರಿಲ್ಯಾಕ್ಸ್ ಮೂಡ್ನಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಶನಿವಾರ ಮೈಸೂರಿನ ಕಲಾಮಂದಿರದಲ್ಲಿ ವಕೀಲರ ಸಂಘ ಪ್ರಸ್ತುತಪಡಿಸಿದ 'ಕುರುಕ್ಷೇತ್ರ' ಪೌರಾಣಿಕ ನಾಟಕವನ್ನು ವೀಕ್ಷಿಸಿದರು.
ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ, ವಿಧಾನಪರಿಷತ್ ಸದಸ್ಯ ಡಾ. ಡಿ. ತಿಮ್ಮಯ್ಯ, ಮಾಜಿ ಶಾಸಕ ಸೋಮಶೇಖರ್ ಸಿದ್ದರಾಮಯ್ಯನವರೊಂದಿಗೆ ನಾಟಕ ವೀಕ್ಷಣೆಯಲ್ಲಿ ಪಾಲ್ಗೊಂಡರು.
ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಎರಡನೇ ಅಭ್ಯರ್ಥಿಯನ್ನಾಗಿ ಮನ್ಸೂರ್ ಅಲಿಖಾನ್ ಅವರನ್ನು ಕಣಕ್ಕಿಳಿಸಲಾಗಿತ್ತಾದರೂ ಅವರು ಪರಾಭವಗೊಂಡಿದ್ದರು. ಇತ್ತ ಜೆಡಿಎಸ್ನ ಕುಪೇಂದ್ರ ರೆಡ್ಡಿ ಅವರನ್ನು ಬೆಂಬಲಿಸದಂತೆ ಕಾಂಗ್ರೆಸ್ನ ಹೈಕಮಾಂಡ್ನ ಮನವೊಲಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದರು. ಹೀಗಾಗಿ ಇಬ್ಬರ ಜಗಳ ಮೂರನೆಯನಿಗೆ ಲಾಭ ಎಂಬಂತೆ ಬಿಜೆಪಿಯ ಲೆಹರ್ಸಿಂಗ್ ಸುಲಭದಲ್ಲಿ ಗೆಲುವು ಕಂಡಿದ್ದರು.