ಬೆಂಗಳೂರು, ಜೂ 10 (DaijiworldNews/DB): ತಾಕತ್ತಿದ್ದರೆ ಶಾಸಕ ಶ್ರೀನಿವಾಸಗೌಡ ಜೆಡಿಎಸ್ಗೆ ರಾಜೀನಾಮೆ ನೀಡಿ ಮತ ಚಲಾವಣೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭಾ ಚುನಾವಣಾ ಮತದಾನದ ವೇಳೆ ಕೋಲಾರ ಶಾಸಕ, ಜೆಡಿಎಸ್ನ ಶ್ರೀನಿವಾಸ ಗೌಡ ಅಡ್ಡ ಮತದಾನ ಮಾಡಿರುವುದಕ್ಕೆ ಗರಂ ಆದ ಕುಮಾರಸ್ವಾಮಿ, ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಹೈಜಾಕ್ ಮಾಡಿದೆ. ಯಾವ ನೈತಿಕತೆಯನ್ನು ಆ ಪಕ್ಷದ ನಾಯಕರು ಉಳಿಸಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರದು ನೀಚ ರಾಜಕಾರಣ. ಗುಬ್ಬಿ ಶ್ರೀನಿವಾಸ್ ಮತ ಹಾಕದೆ ಖಾಲಿ ಬ್ಯಾಲೆಟ್ನೊಂದಿಗೆ ಹೊರ ಬಂದು ಜೆಡಿಎಸ್ಗೆ ಹಾಕಿದ್ದೇನೆ ಎಂದಿದ್ದಾರೆ. ಅವರ ಹಣೆಬರಹ ಸಂಜೆ ವೇಳೆ ಗೊತ್ತಾಗಲಿದೆ. ಇವರೆಲ್ಲರು ಕೀಳು ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.