ದೆಹಲಿ, ಜೂ 10 (DaijiworldNews/HR): ಗಾಯಕ ಸಿಧು ಮೂಸೆ ವಾಲಾ ಹತ್ಯೆಯ ತನಿಖೆ ನಡೆಸುತ್ತಿರುವ ಪಂಜಾಬ್ ಪೊಲೀಸ್ ವಿಶೇಷ ತನಿಖಾ ತಂಡ (ಎಸ್ಐಟಿ) ಎಂಟು ಜನರ ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.
ಬಂಧಿತನನ್ನು ಹರಿಯಾಣದ ಸಿರ್ಸಾದ ಸಂದೀಪ್ ಸಿಂಗ್ ಅಲಿಯಾಸ್ ಕೆಕ್ಡಾ ಎಂದು ಗುರುತಿಸಲಾಗಿದೆ.
ಅಪರಿಚಿತ ದುಷ್ಕರ್ಮಿಗಳು ಮೇ 29 ರಂದು ಸಂಜೆ 4.30 ಕ್ಕೆ ಮನೆಯಿಂದ ಹೊರಬಂದ ಮೂಸೆ ವಾಲಾ ಅವರನ್ನು ಗುಂಡಿಕ್ಕಿ ಕೊಂದಿದ್ದರು.
ಉಳಿದ ಏಳು ಆರೋಪಿಗಳನ್ನು ಮನ್ಪ್ರೀತ್ ಸಿಂಗ್, ಬಟಿಂಡಾದ ತಲ್ವಾಂಡಿ ಸಾಬೊ ಅಲಿಯಾಸ್ ಮನ್ನಾ, ಧೈಪೈ, ಫರೀದ್ಕೋಟ್ನ ಮನ್ಪ್ರೀತ್ ಭಾವು, ಅಮೃತಸರದ ದೊಡೆ ಕಲ್ಸಿಯಾ ಗ್ರಾಮದ ಸರಾಜ್ ಮಿಂಟು, ಹರಿಯಾಣದ ತಖತ್ ಮಾಲ್ನ ಪ್ರಭದೀಪ್ ಸಿಧು ಅಲಿಯಾಸ್ ಪಬ್ಬಿ, ಹರಿಯಾಣದ ಸೋನೆಪತ್ನ ರೆವ್ಲಿ ಗ್ರಾಮದ ಮೋನು ದಾಗರ್, ಪವನ್ ಬಿಷ್ಣೋಯ್ ಮತ್ತು ನಸೀಬ್, ಹರಿಯಾಣದ ಫತೇಹಾಬಾದ್ ನಿವಾಸಿಗಳು ಎನ್ನಲಾಗಿದೆ.