ಬೆಂಗಳೂರು, ಜೂ 10 (DaijiworldNews/HR): ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸುಮ್ಮನೆ ನಾಟಕವಾಡುತ್ತಿವೆ. ರಾಜ್ಯಸಭೆಯ ನಾಲ್ಕನೇ ಸ್ಥಾನವನ್ನು ಕೂಡ ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ಕಂದಾಯ ಸಚಿವ ಆರ್.ಅಶೋಕ್ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳಿಗೆ ಹೋಲಿಸಿದರೆ ಎರಡನೇ ಪ್ರಾಶಸ್ತ್ಯದ ಮತಗಳು ನಮ್ಮ ಬಳಿ ಹೆಚ್ಚಿದ್ದು, ಗೆಲ್ಲುವ ವಿಶ್ವಾಸದಿಂದಲೇ ಮೂರನೇ ಅಭ್ಯರ್ಥಿಯನ್ನು ಸ್ಪರ್ಧೆಗೆ ಇಳಿಸಿದ್ದೇವೆ ಎಂದರು.
ಇನ್ನು ಪಕ್ಷದ ಶಾಸಕರ ಮೇಲೆ ಬಿಜೆಪಿ ನಾಯಕರು ತೀವ್ರ ನಿಗಾ ವ್ಯವಸ್ಥೆ ಮಾಡಿದ್ದು, ಅಡ್ಡ ಮತದಾನದ ಶಂಕೆ ಮೂಡಿರುವ ತನ್ನ ಶಾಸಕರಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಲು ಒತ್ತು ನೀಡಿದೆ.