ಬೆಂಗಳೂರು, ಜೂ 09 (DaijiworldNews/HR): ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪುತ್ರಿ ರೇಣುಕಾ ನಾನು ಎಂಎಲ್ಎ ಪುತ್ರಿ ಎಂಬುದಾಗಿ ನಡು ರಸ್ತೆಯಲ್ಲಿಯೇ ಸಂಚಾರಿ ಪೊಲೀಸರನ್ನು ನಿಂದಿಸಿ, ರಂಪಾಟ ಮೆರೆದಿದ್ದರು. ಈ ಘಟನೆಯ ಸಂಬಂಧ ಇದೀಗ ಶಾಸಕ ಅರವಿಂದ ಲಿಂಬಾವಳಿ ನನ್ನ ಮಗಳ ವರ್ತನೆಯಿಂದ ನೋವಾಗಿದ್ದರೇ ಕ್ಷಮಿಸಿ ಎಂದು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗಳು ರೇಣುಕಾ ಅವರ ಸ್ನೇಹಿತ ತರುಣ್ ಎಂಬಾತ ಕಾರನ್ನು ಜೋರಾಗಿ ಓಡಿಸಿದ್ದಾನೆ. ಸಂಚಾರ ನಿಯಮ ಉಲ್ಲಂಘಿಸಿದ ಕಾರಣ, ಪೊಲೀಸರಿಗೆ ನನ್ನ ಮಗಳ ಸ್ನೇಹಿತನೇ ದಂಡ ಕಟ್ಟಿದ್ದಾನೆ ಎಂದರು..
ಇನ್ನು ನನ್ನ ಮಗಳ ವರ್ತನೆಯಿಂದ ಪೊಲೀಸರಿಗೆ, ಯಾರಿಗಾದರೂ ನೋವಾಗಿದ್ದರೇ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.