ಕೋಲಾರ, ಜೂ 09 (DaijiworldNews/DB): ಸಿದ್ದರಾಮಯ್ಯ ಅವರ ಭೇಟೆಗಾಗಿ ಸೀಳುನಾಯಿಗಳು ಹೊಂಚು ಹಾಕುತ್ತಿವೆ ಎಂದು ಸಚಿವ ಮುನಿರತ್ನ ಲೇವಡಿ ಮಾಡಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಸೀಳುನಾಯಿಗಳು ಮಾತ್ರವಲ್ಲ. ತಿಮಿಂಗಿಲ, ಹಾವು, ಮೊಸಳೆ, ಚೇಳು ಕೂಡಾ ಅವರನ್ನು ಭೇಟೆಯಾಡಲು ಅವರ ಸುತ್ತ ತಿರುಗುತ್ತಿವೆ. ಯಾವಾಗ ಸಿದ್ದರಾಮಯ್ಯ ಅವರಿಗೆ ಇವುಗಳೆಲ್ಲ ಏನು ಮಾಡುತ್ತವೆಯೋ ತಿಳಿಯದು ಎಂದರು.
ಸಿದ್ದರಾಮಯ್ಯ ಅವರು ನಮಗೆ ಸೀಳು ನಾಯಿ ಎನ್ನತ್ತಾರೆ. ಆದರೆ ಅವರು ಸ್ವಲ್ಪ ಎಚ್ಚರ ತಪ್ಪಿದರೂ ಪಕ್ಕದಲ್ಲೇ, ಸುತ್ತಮುತ್ತಲೂ ಇರುವ ಸೀಳುನಾಯಿಗಳು ಅವರನ್ನು ತಿಂದು ಹಾಕುವುದು ನಿಶ್ಚಿತ. ನಮಗೆ ಹೇಳುವ ಬದಲು ಅವರೇ ತುಸು ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಎಂದು ಅವರು ವ್ಯಂಗ್ಯವಾಡಿದರು.