ಬೆಂಗಳೂರು, ಜೂ 09 (DaijiworldNews/HR): ನಟಿ ರಮ್ಯಾ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ನಿಂದಿಸಿದಂತ ವ್ಯಕ್ತಿಯೊಬ್ಬರ ಬಂಧನಕ್ಕಾಗಿ ರಮ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿಯವರೊಂದಿಗೆ ಈ ವಿಷಯವಾಗಿ ಚರ್ಚಿಸಿ ಬಳಿಕ ಹಲಸೂರು ಗೇಟ್ ಪೊಲೀಸ್ ಠಾಣೆಗೆ ತೆರಳಿ, ತಾನು ಮಾಡಿದಂತ ಇನ್ಟಾಗ್ರಾಂ ಪೋಸ್ಟ್ ಒಂದಕ್ಕೆ ಕಾಮೆಂಟ್ ಮಾಡಿ, ನಿಂದಿಸಿದಂತ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಂತೆ ದೂರು ನೀಡಿದ್ದಾರೆ.
ಜೂನ್ 6ರಂದು ಚಾರ್ಲಿ 777 ಕನ್ನಡ ಸಿನಿಮಾ ಸಂಬಂಧ ಚಾರ್ಲಿ ನೋಡಿ, ಈ ಸಿನಿಮಾ ಚೆನ್ನಾಗಿದೆ ಎಂಬುದಾಗಿ ಇನ್ಟಾಗ್ರಾಂ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಈ ಪೋಸ್ಟ್ ಗೆ ಜೂನ್.8ರಂದು ಪ್ರೀತಂ ಪ್ರಿನ್ಸ್ ಕೆ ಎಂಬಾತ ರಮ್ಯ ನಿಂದಿಸಿ, ಅಶ್ಲೀಲವಾಗಿ ಕಾಮೆಂಟ್ ಮಾಡಿ, ಟ್ಯಾಗ್ ಮಾಡಿದ್ದ ಎನ್ನಲಾಗಿದೆ.