ಬೆಂಗಳೂರು, ಜೂ 09 (DaijiworldNews/HR): ಜೆಡಿಎಸ್ ಶಾಸಕರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದು, ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಖಾನ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿರುವುದಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಮ್ಮ ಪಕ್ಷದ ಶಾಸಕರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯನವರಿಗೆ ನಾಚಿಕೆಯಾಗಬೇಕು. ಆತ್ಮಸಾಕ್ಷಿ ಅಂದರೆ ಇದೆ ಏನು? ಇದು ಆತ್ಮಸಾಕ್ಷಿ ಪ್ರಕಾರ ಸಂಪರ್ಕವೇ ವ್ಯಾಪಾರವೇ? ಎಂದು ಪ್ರಶ್ನಿಸಿದ್ದಾರೆ.
ಇನ್ನು ನಮ್ಮ ಪಕ್ಷದ ಶಾಸಕರನ್ನು ಸೋಲಿಸಲು ಕಳೆದ ಚುನಾವಣೆಯಲ್ಲಿ ಬಿಜೆಪಿ ಬಿ ಟೀಂ ಎಂದು ಕರೆದರು ಈಗ ಯಾವ ನೈತಿಕತೆ ಮೇಲೆ ನಮ್ಮ ಶಾಸಕರಿಗೆ ಪತ್ರ ಬರೆದರು? ಈಗ ನಿಮಗೆ ಜೆಡಿಎಸ್ ಬಗ್ಗೆ ಜ್ಞಾನೋದಯವಾಯಿತೆ? ಎಂದಿದ್ದಾರೆ.
ನಾನು ಕಾಂಗ್ರೆಸ್ ನ ಬೆಂಬಲಕ್ಕಾಗಿ ಮಾತುಕತೆ ನಡೆಸಿದ್ದು ನಿಜ. ಆದರೆ ಕಾಂಗ್ರೆಸ್ ರಾಜ್ಯ ನಾಯಕರು ಚರ್ಗೆಗೆ ಬಂದ್ರಾ? ಆತ್ಮ ಸಾಕ್ಷಿ ಮಾತನಾಡಲು ನಾವೇನು ನಿಮಗೆ ಅಡಿಯಾಳುಗಳಾ? ಎಂದು ವಾಗ್ದಾಳಿ ನಡೆಸಿದ್ದಾರೆ.