ಬೆಂಗಳೂರು, ಜೂ 06 (DaijiworldNews/HR): ಚಡ್ಡಿಯಿಂದ ಪ್ಯಾಂಟಿಗೆ ಬದಲಾದರೂ ಮನಸ್ಥಿತಿ ಬದಲಾಗಿಲ್ಲ ಎಂದು ಬಿಜೆಪಿ ವಿರುದ್ದ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಹೇಳಿದ್ದಾರೆ.
ವಿಪಕ್ಷ ನಾಯಕ ಸಿದ್ಧರಾಮಯ್ಯ ಚಡ್ಡಿ ಸುಡೋ ಅಭಿಯಾನ ಆರಂಭಿಸಲಾಗುತ್ತದೆ ಎನ್ನುವ ಹೇಳಿಕೆ ವಿರುದ್ಧ, ಬಿಜೆಪಿ ನಾಯಕರು ವಾಕ್ ಸಮರವನ್ನೇ ಸಾರಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ಪ್ರತಿಭಟನೆಗೆ ನಾನಾ ಆಯಾಮಗಳು ಸಾಂಕೇತಿಕವಾಗಿ ಸಚಿವ ನಾಗೇಶ್ ಮನೆ ಮುಂದೆ ಪ್ರತಿಭಟನೆ ಮಾಡಿದ NSUI ಚಡ್ಡಿ ಸುಟ್ಟ ನೆಪದಲ್ಲಿ ಸುಳ್ಳು ಕೇಸು ದಾಖಲಿಸಿ ಗಣವೇಶದ ಅಪಹಾಸ್ಯಗಳನ್ನು ಬೀದಿ ಚರ್ಚೆಗೆ ತಂದ ಆರ್ಎಸ್ಎಸ್ ಸಂವೇದನೆ ಕಳೆದುಕೊಂಡಿದೆ ಚಡ್ಡಿಯಿಂದ ಪ್ಯಾಂಟಿಗೆ ಬದಲಾದರೂ ಮನಸ್ಥಿತಿ ಬದಲಾಗಿಲ್ಲ ಎಂದು ಕಿಡಿಕಾರಿದ್ದಾರೆ.