ಬೆಂಗಳೂರು, ಮೇ 21 (DaijiworldNews/MS): ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಎಂಟು ವರ್ಷದಿಂದ ಹಾಡಿದ ರಾಗವನ್ನೇ ರಾಜ್ಯ ಬಿಜೆಪಿ ನಾಯಕರು ಮೂರು ವರ್ಷದಿಂದ ಹಾಡ್ತಿದ್ದಾರೆ. ನೀವು ಅಧಿಕಾರಕ್ಕೆ ಬಂದು ಮಾಡಿದ್ದಾದ್ರೂ ಏನು ? ಕೊಟ್ಟ ಕುದುರೆ ಏರಲಾರದವನು ವೀರನೂ ಅಲ್ಲ, ಶೂರನೂ ಅಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ದ ಲೇವಡಿ ಮಾಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರ್ವ ಅವರು, "ನಮ್ಮ ಸರ್ಕಾರವಿದ್ದಾಗ ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ ರೂ. 1217 ಕೋಟಿ ಅನುದಾನ ನೀಡಿದ್ದೆವು. ಕಳೆದ ಬಜೆಟ್ ನಲ್ಲಿ ಬಿಜೆಪಿ ಸರ್ಕಾರ ಬೆಂಗಳೂರಿಗೆ ರೂ. 1500 ಕೋಟಿ ಘೋಷಣೆ ಮಾಡಿದ್ದು ಬಿಟ್ಟರೆ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ.ಪಾಪ ಮಾಡಿದವರು ಯಾರಪ್ಪ ಅರ್. ಆಶೋಕ್ ಎಂದು ಪ್ರಶ್ನಿಸಿದ್ದಾರೆ.
ಕಳೆದ ಬಾರಿ ಬಿಬಿಎಂಪಿ ಮೇಯರ್ ಆಗಿದ್ದವರು ಬಿಜೆಪಿಯವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು ಮೂರು ವರ್ಷ ತುಂಬುತ್ತಾ ಬಂತು. ನೀವೇ ತುಂಬಿಸಿರುವ 40%ಕಮಿಷನ್ ಎಂಬ ಪಾಪದ ಕೊಡ ತಲೆ ಮೇಲಿಟ್ಟುಕೊಂಡು ನಮ್ಮನ್ನ ದೂರಿದ್ರೆ ಹೇಗಪ್ಪ ಆರ್. ಆಶೋಕ್ಎಂದು ತಿರುಗೇಟು ನೀಡಿದ್ದಾರೆ.