ನವದೆಹಲಿ, ಮೇ 10 (DaijiworldNews/DB): ವಿಶೇಷ ಚೇತನ ಮಗುವಿಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣ ನಿರ್ಬಧಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 1 ವಾರದೊಳಗೆ ಡಿಜಿಸಿಎ ನೇತೃತ್ವದ ತ್ರಿಸದಸ್ಯ ಸಮಿತಿ ಸಾಕ್ಷ್ಯ ಸಂಗ್ರಹಿಸಲಿದೆ ಎಂದು ಕೇಂದ್ರ ಪ್ರಯಾಣಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಘಟನೆಯ ಸತ್ಯಾಸತ್ಯತೆ ತಿಳಿದುಕೊಳ್ಳುವ ಸಲುವಾಗಿ ತ್ರಿಸದಸ್ಯ ಸಮಿತಿ ರಚಿಸಲಾಗಿದೆ. ರಾಂಚಿ ಮತ್ತು ಹೈದರಾಬಾದ್ಗೆ ತೆರಳಿ ಈ ತಂಡ ಸೂಕ್ತ ಪರಿಶೀಲನೆ ನಡೆದಿ ತನಿಖೆ ಮಾಡಲಿದೆ. ಇಂಡಿಗೋ ಅಧಿಕಾರಿಗಳೂ ಈ ಲೋಪದ ಕುರಿತು ವಿಸ್ತೃತ ವಿಚಾರಣೆ ನಡೆಸಬೇಕು. ಇಂತಹ ವರ್ತನೆಗಳು ಸಹ್ಯವಲ್ಲ ಎಂದು ತಿಳಿಸಿದ್ದಾರೆ.
ವಿಶೇಷ ಚೇತನ ಮಗುವು ವಿಮಾನ ಏರುವುದನ್ನು ನಿರ್ಬಂಧಿಸಿ ವಿಮಾನಯಾನ ಸಂಸ್ಥೆಯ ಸಿಬಂದಿ ವಾಗ್ವಾದ ನಡೆಸುತ್ತಿರುವ ವೀಡಿಯೋ ವೈರಲ್ ಆಗಿತ್ತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವಾಲಯವು ಇದರ ತನಿಖೆಗಾಗಿ ತ್ರಿಸದಸ್ಯ ಸಮಿತಿಯನ್ನು ನೇಮಿಸಿತ್ತು.