ಜೈಪುರ್, ಏ 25 (DaijiworldNews/DB): ನವ ನಿವಾಹಿತ ದಲಿತ ದಂಪತಿಗೆ ದೇವರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನಿರಾಕರಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಘಟನೆ ಸಂಬಂಧ ಅರ್ಚಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಜಲೋರ್ನ ದೇವಸ್ಥಾನದಲ್ಲಿ ಘಟನೆ ನಡೆದಿದ್ದು, ನೀಲಕಂಠ ಗ್ರಾಮದ ದೇವಸ್ಥಾನದ ಗೇಟ್ನ ಬಳಿಯೇ ವೇಲಾ ಮತ್ತು ಭಾರತಿ ದಂಪತಿಯನ್ನು ತಡೆದು ದೇವಳ ಒಳ ಪ್ರವೇಶಿಸದಂತೆ ಹೇಳಲಾಗಿದೆ. ಇದರಿಂದ ಅರ್ಚಕ ಮತ್ತು ದಂಪತಿಯ ನಡುವೆ ಮಾತಿನ ಚಕಮಕಿ ನಡೆದಿತ್ತು. ಅಲ್ಲದೆ, ಅರ್ಚಕನ ವಿರುದ್ದ ದಂಪತಿ ದೂರು ನೀಡಿದ್ದರು. ಸದ್ಯ ಈ ಅಮಾನುಷ ಘಟನೆಯ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಅರ್ಚಕನನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಜಲೋರ್ ಪೊಲೀಸ್ ವರಿಷ್ಠಾಧಿಕಾರಿ ಹರ್ಷವರ್ಧನ್ ಅಗರ್ವಾಲಾ ತಿಳಿಸಿದ್ದಾರೆ.
ನವದಂಪತಿಯು ತೆಂಗಿನಕಾಯಿ ಅರ್ಪಿಸಲು ದೇವಳಕ್ಕೆ ಬಂದಿದ್ದರು.